![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಕಳೆದ ಹಲವು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕೆಯ್ಯೂರು ಗ್ರಾಮದ ಪಲ್ಲತ್ತಡ್ಕ ಮೋನಪ್ಪ ಬೈರ ಎಂಬವರಿಗೆ ಕೆಯ್ಯೂರು ಗ್ರಾಮೀಣ ಕಾಂಗ್ರೆಸ್ ವತಿಯಿಂದ ಆರ್ಥಿಕ ಸಹಾಯ ನೀಡಲಾಯಿತು. ಮೋನಪ್ಪ ಬೈರರವರು ಪಲ್ಲತ್ತಡ್ಕದಲ್ಲಿ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದು ಆರ್ಥಿಕವಾಗಿ ತೀರ ಬಡವರಾಗಿದ್ದಾರೆ. ವಾರದಲ್ಲಿ ಎರಡು ದಿನ ಡಯಾಲೀಸಿಸ್ ಮಾಡಬೇಕಾಗಿರುವುದರಿಂದ ಇವರಿಗೆ ಆಸ್ಪತ್ರೆಗೆ ಹೋಗಿ ಬರಲು ಕೂಡ ಕಷ್ಟವಾಗುತ್ತಿತ್ತು. ಇವರ ಕಷ್ಟವನ್ನು ಅರಿತ ಕೆಯ್ಯೂರು ಗ್ರಾಮೀಣ ಕಾಂಗ್ರೆಸ್ನ ಕಾರ್ಯದರ್ಶಿ ಜಯಂತ ಪೂಜಾರಿ ಕೆಂಗುಡೇಲುರವರು ತನ್ನ ಬಳಗದವರೊಂದಿಗೆ ಮಾತನಾಡಿ ಇವರಿಗೆ ಆರ್ಥಿಕ ಸಹಾಯದ ವ್ಯವಸ್ಥೆಯನ್ನು ಮಾಡಿದ್ದರು. ಆ.19 ರಂದು ಮೋನಪ್ಪ ಬೈರರವರ ಮನೆಗೆ ತೆರಳಿ ಆರ್ಥಿಕ ಸಹಾಯವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಎ.ಕೆ ಜಯರಾಮ ರೈ, ಕಾರ್ಯದರ್ಶಿ ಜಯಂತ ಪೂಜಾರಿ ಕೆಂಗುಡೇಲು, ಪದಾಧಿಕಾರಿಗಳಾದ ಅಬ್ದುಲ್ ಖಾದರ್ ಮೇರ್ಲ, ಹರಿನಾಥ ರೈ ಕೂಡೇಲು, ದಾಮೋದರ ಪೂಜಾರಿ, ಚಂದ್ರಶೇಖರ ಕಣಿಯಾರು, ನಾರಾಯಣ ಪೂಜಾರಿ ಕೆಯ್ಯೂರು, ವಿಶ್ವನಾಥ ಪೂಜಾರಿ ಕೆಂಗುಡೇಲು, ಅಬೂಬಕ್ಕರ್ ಎಂ.ಎಂ, ಉದಯ ಕೆಂಗುಡೇಲು, ಸತ್ತಾರ್ ಕೆಯ್ಯೂರು, ಸಂತೋಷ್ ಕುಮಾರ್ ರೈ ಇಳಂತಾಜೆ, ಅಶೋಕ್ ರೈ ದೇರ್ಲ, ಶೀನಪ್ಪ ರೈ ದೇವಿನಗರ, ಹಾರೀಶ್ ಪಾತುಂಜ ಮತ್ತಿತರರು ಉಪಸ್ಥಿತರಿದ್ದರು.