ಪುತ್ತೂರು:ಲಗೋರಿ ಫ್ರೆಂಡ್ಸ್ ಕ್ಲಬ್ ಆಮ್ಮುಂಜ ಇದರ ಆಶ್ರಯದಲ್ಲಿ ಆಮ್ಮುಂಜ ಸುಕುಮಾರ ಗೌಡರ ಮನೆ ವಠಾರದಲ್ಲಿ ಮೆಸ್ಕಾಂ ಕಿರಿಯ ಇಂಜಿನಿಯರ್ ಸುಂದರ್ ರವರು ಧ್ವಜಾರೋಹಣವನ್ನು ನೆರವೇರಿಸಿ ಸ್ವಾತಂತ್ರ್ಯ ಸಂದೇಶವನ್ನು ಸಾರಿದರು.
ಮುಂಡೂರು ಶಾಲಾ ಶಿಕ್ಷಕಿ ವನಿತಾ ರೈ ಹಾಗೂ ಸರ್ಕಾರಿ ಮಹಿಳಾ ಕಾಲೇಜು ಪುತ್ತೂರು ಇಲ್ಲಿನ ಉಪನ್ಯಾಸಕಿ ಗೀತಾ ಪುಂಡರೀಕರವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸ್ವಾತಂತ್ರ ಅಮೃತ ಮಹೋತ್ಸವದ ಸಲುವಾಗಿ ಲಗೋರಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಮೆಸ್ಕಾಂ ಪವರ್ ಮ್ಯಾನ್ ಗಳಾದ ಡೆನ್ನಿಸ್ ಪಿರೇರಾ, ಚಂದ್ರಶೇಖರ್ ಎಸ್ ಮೇಸ್ತಕ, ಬಸವರಾಜ ಖಂಡೋಜ ರವರನ್ನು ಗೌರವಿಸಲಾಯಿತು ಹಾಗೂ ಸ್ಥಳೀಯ ಅನಾರೋಗ್ಯ ಪೀಡಿತರಾದ ಒಬ್ಬರಿಗೆ ಒಂದು ತಿಂಗಳ ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ ನಾಯ್ಕ್, ಸಂಪ್ಯ ಶ್ರೀ ಅಮ್ಮನವರ ದೇವಸ್ಥಾನ ನೇರಳಕಟ್ಟೆ ಆರ್ಯಾಪು ಇದರ ಅಧ್ಯಕ್ಷ ರವಿಚಂದ್ರ ಆಚಾರ್ಯ ಕಂಬಳದಡ್ಡ ಹಾಗೂ ಲಗೋರಿ ಫ್ರೆಂಡ್ಸ್ ಕ್ಲಬ್ ಸದಸ್ಯರಾದ ಪ್ರವೀಣ ಗೌಡ, ಹರೀಶ್ ಸಪಲ್ಯ, ರಿತೇಶ್ ಪೂಜಾರಿ, ಹಿತೇಶ್, ವಿಖ್ಯಾತ್ ಯನ್ ಸುವರ್ಣ, ಗೋಪಾಲಕೃಷ್ಣ ಕರೆಜ್ಜ, ಅಶ್ವಿತ್, ಕವಿತಾ ಸುಕುಮಾರ ಗೌಡ, ರಕ್ಷಾ, ನಿಶ್ಮಿತಾ ಯನ್ ಸುವರ್ಣ, ಬ್ರಿಜೇಶ್ ಶೆಟ್ಟಿ, ಪ್ರದೀಪ್ ರೈ, ಸ್ಥಳೀಯರಾದ ಕಿಟ್ಟಣ್ಣ ರೈ, ವಿಶ್ವಜಿತ್ ಅಮ್ಮುಂಜ, ಚಂದ್ರ ಸಪಲ್ಯ, ಉಮ್ಮರ್, ಇರ್ಷಾದ್, ಇಬ್ರಾಹಿಂ, ಸುಜಿತ್, ಆಲಿಕುಂಞ, ಹಸೈನರ್, ಭವಾನಿ ನೇಮಾಕ್ಷ ಸುವರ್ಣ, ಸುಮಿತ್ರ ವಿಶ್ವಜಿತ್`ಅಮ್ಮುಂಜ, ಗೀತಾ ಚಂದ್ರ ಸಪಲ್ಯ, ಲಕ್ಷ್ಮಿ ವಿಠಲ ಪೂಜಾರಿ, ಅನುರಾಧ ಹರೀಶ್ ಸಪಲ್ಯ, ವೈಶಾಲಿ, ರತ್ನಕುಮಾರಿ ರೈ, ಸುನಂದ ಕೊರಗಪ್ಪ ಪೂಜಾರಿ ಮತ್ತಿತರು ಉಪಸ್ಥಿತರಿದ್ದರು.
ಆರ್ಯಾಪು ಗ್ರಾ.ಪಂ ಸದಸ್ಯ ನೇಮಾಕ್ಷ ಸುವರ್ಣ ಸ್ವಾಗತಿಸಿ, ಲಗೋರಿ ಫ್ರೆಂಡ್ಸ್ ಕ್ಲಬ್ ಆಮ್ಮುಂಜ ಇದರ ಅಧ್ಯಕ್ಷ ಸುಕುಮಾರ್ ಗೌಡ ವಂದಿಸಿದರು.