ಹಳೇ ಸ್ಕೂಟರ್ ಏರಿದ ಆಧುನಿಕ ಶ್ರವಣ ಕುಮಾರ ತಾಯಿಯೊಂದಿಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ

0

ಪುತ್ತೂರು: ಮೈಸೂರಿನಿಂದ ತನ್ನ ತಾಯಿಯೊಂದಿಗೆ ದೇಶ ಸುತ್ತುತ್ತಾ, ಹಳೆ ಸ್ಕೂಟರ್ ಏರಿ ತೀರ್ಥಯಾತ್ರೆ ಮಾಡುತ್ತಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲಾ ಯಾತ್ರೆಯಲ್ಲಿರುವ ಮೈಸೂರಿನ ಕೃಷ್ಣಕುಮಾರ್ (44ವ) ಹಾಗೂ ಅವರ ತಾಯಿ ಚೂಡರತ್ಮಮ್ಮ (72ವ) ಎಂಬವರು ಆ.20ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ಮಾಡಿ ಶ್ರೀದೇವರ ದರುಶನ ಮಾಡಿದರು.

ಅವಿವಾಹಿತರಾಗಿರುವ ಕೃಷ್ಣ ಕುಮಾರ್ ಅವರು ತಮ್ಮ ತಾಯಿಯ ಜತೆ ಜೀವನ ಕಳೆಯುತ್ತಿದ್ದು, ತಾಯಿ ಆಸೆ ಪಡುವ ಸ್ಥಳಗಳಿಗೆ ಕರೆದೊಯ್ಯುತ್ತಿದ್ದಾರೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಪ್ರಸಾದ ವಿತರಿಸಿದರು.

LEAVE A REPLY

Please enter your comment!
Please enter your name here