ಕಾಣಿಯೂರು : ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನದಲ್ಲಿ ಶ್ರಾವಣ ಶನಿವಾರದಂದು ವಿಶೇಷ ತೀರ್ಥ ಸ್ನಾನ ನಡೆಯಿತು. ಇಲ್ಲಿನ ತೀರ್ಥ ಬಾವಿಯನ್ನು ಭೀಮಸೇನ ತನ್ನ ಕಿರು ಬೆರಳೂರಿ ನಿರ್ಮಿಸಿದನೆಂದು ಪ್ರತೀತಿ ಇರುವುದರಿಂದ ಇದು ಗಂಗೆಯಷ್ಟೆ ಪಾವಿತ್ರತೆಯನ್ನು ಹೊಂದಿದೆ. ವಿವಿಧ ಕಡೆಗಳಿಂದ ಬರುವ ಭಕ್ತಾದಿಗಳು ತೀರ್ಥ ಸ್ನಾನ ಮಾಡಿಕೊಂಡು ಹೋಗುವುದು ಇಲ್ಲಿನ ವಿಶೇಷತೆ.
ಈ ಬಾವಿಯ ತೀರ್ಥ ಸ್ನಾನ ಮಾಡಿದರೆ ಕುದಿಜ್ವರ, ಕೆಡುಗಳು ಗುಣವಾಗುವುದೆಂದೂ ಪ್ರಸಿದ್ದಿ ಇದೆ. ಮಕ್ಕಳಿಲ್ಲದವರು ರಂಗಪೂಜೆ ಹರಕೆ ಹೇಳಿ ಸಂತಾನ ಪ್ರಾಪ್ತಿಯಾದ ನಿದರ್ಶನಗಳಿವೆ. ಆ.20ರಿಂದ ಸೆ.17ರವರೆಗೆ ಪ್ರತಿ ಪ್ರತಿದಿನ ಶ್ರಾವಣ ಶನಿವಾರ ಬೆಳಿಗ್ಗೆ ಗಂಟೆ ೭ರಿಂದ ೧೧ರವರೆಗೆ ತೀರ್ಥ ಸ್ನಾನ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ ತಿಳಿಸಿದ್ದಾರೆ.