ಚಾರ್ವಿ ಕಜೆಮಾರ್ ಹುಟ್ಟುಹಬ್ಬ-ಪುತ್ತೂರು ಪ್ರಜ್ಞಾ ಆಶ್ರಮಕ್ಕೆ ಕೊಡುಗೆ

0

ಪುತ್ತೂರು: ಪತ್ರಕರ್ತ ಸಿಶೇ ಕಜೆಮಾರ್ ಮತ್ತು ಪಂಚಾಯತ್ ಉದ್ಯೋಗಿ ಮಮತಾ ಕಜೆಮಾರ್‌ ಪುತ್ರಿ,  ಚಾರ್ವಿ ಕಜೆಮಾರ್‌ ಮೊದಲ ವರ್ಷದ ಹುಟ್ಟುಹಬ್ಬವನ್ನು ಆ.27 ರಂದು ಸರಳ ರೀತಿಯಲ್ಲಿ ಆಚರಿಸಿದರು.

ಹುಟ್ಟು ಹಬ್ಬದ ಪ್ರಯುಕ್ತ ಪುತ್ತೂರು ಬೀರಮಲೆಯಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ತರಕಾರಿ ಇಡುವ ಸ್ಟ್ಯಾಂಡ್ ಹಾಗೂ ಕಾಲೊರೆಸುವ ಮ್ಯಾಟ್‌ಗಳನ್ನು ಕೊಡುಗೆಯಾಗಿ ಅಲ್ಲದೆ ಮಧ್ಯಾಹ್ನದ ಊಟವನ್ನು ನೀಡಲಾಯಿತು. ಆಶ್ರಮದ ಅಣ್ಣಪ್ಪರವರು ಕೊಡುಗೆಗಳನ್ನು ಸ್ವೀಕರಿಸಿದರು. ಪ್ರಜ್ಞಾ ಆಶ್ರಮವು ದೇವರ ಮಕ್ಕಳು ಎಂದೇ ಕರೆಯಲ್ಪಡುವ ವಿಶೇಷಚೇತನರು ಹೊಂದಿರುವ ಆಶ್ರಮವಾಗಿದೆ.  15 ವಿಶೇಷಚೇತನರನ್ನು ಹೊಂದಿರುವ ಆಶ್ರಮ ಇದಾಗಿದೆ.

 

 

 

LEAVE A REPLY

Please enter your comment!
Please enter your name here