ನೀರಾಜೆ ನೂರುಲ್ ಹುದಾ ಮದ್ರಸ ಸಮಿತಿ ಮಹಾಸಭೆ: ಅಧ್ಯಕ್ಷ ನಝೀರ್, ಕಾರ‍್ಯದರ್ಶಿ ಶರೀಫ್, ಖಜಾಂಚಿಯಾಗಿ ಇಬ್ರಾಹಿಂ ಮೋನು ಆಯ್ಕೆ

0

ಉಪ್ಪಿನಂಗಡಿ: ನೂರುಲ್ ಹುದಾ ಮದ್ರಸ ನೀರಾಜೆ ಇದರ ನೂತನ ಅಧ್ಯಕ್ಷರಾಗಿ ನಝೀರ್ ಎನ್.ಕೆ. ಮತ್ತು ಪ್ರಧಾನ ಕಾರ‍್ಯದರ್ಶಿಯಾಗಿ ಶರೀಫ್ ನೀರಾಜೆ ಹಾಗೂ ಖಜಾಂಚಿಯಾಗಿ ಇಬ್ರಾಹಿಂ ಮೋನು ಆತೂರು ಆಯ್ಕೆಯಾಗಿದ್ದಾರೆ.


ಸಮಿತಿಯ ಗೌರವಾಧ್ಯಕ್ಷ, ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸೈಯ್ಯದ್ ಜುನೈದ್ ಜಿಫ್ರಿ ತಂಙಳ್ ಅಧ್ಯಕ್ಷತೆಯಲ್ಲಿ, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಹ್ಮದ್ ಕುಂಞ, ಕಾರ‍್ಯದರ್ಶಿ ಸಿರಾಜ್ ಬಡ್ಡಮೆ, ಸದಸ್ಯರುಗಳಾದ ಪೊಡಿಕುಂಞ ನೀರಾಜೆ, ಬಿ.ಆರ್. ಅಬ್ದುಲ್ ಖಾದರ್, ನೀರಾಜೆ ಮದ್ರಸದ ಸದರ್ ಮುಅಲ್ಲಿಂ ಎಂ.ಹೆಚ್. ಹಂಝ ಮದನಿ, ಅಬ್ದುಲ್ಲ ಮುಸ್ಲಿಯಾರ್ ಉಪಸ್ಥಿತಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಗಿ ಉಳಿದಂತೆ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ಸಿದ್ದಿಕ್ ಎನ್., ಅಶ್ರಫ್ ಪಾಲೆತ್ತಡಿ (ಉಪಾಧ್ಯಕ್ಷರು), ಪುತ್ತುಂಞ ನೀರಾಜೆ (ಜೊತೆ ಕಾರ‍್ಯದರ್ಶಿ), ಎನ್.ಎಂ. ನಝೀರ್ ಕೊಲ, ಇಸುಬು ಎನ್., ರಜಾಕ್ ಜನಪ್ರಿಯ ನೀರಾಜೆ, ಅಶ್ರಫ್ ಕೊಯಿಲ, ಇಸ್ಮಾಯಿಲ್ ಪಾಲೆತ್ತಡಿ, ಸಿದ್ದಿಕ್ ಕೊಯಿಲ, ಇಸ್ಮಾಯಿಲ್ ಸಿ.ಕೆ., ಆದಂ ಕುಂಞ ಕೊಲ, ನವಾಜ್ ಕೊಯಿಲ (ಕಾರ‍್ಯಕಾರಿ ಸಮಿತಿ ಸದಸ್ಯರು) ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here