ಇಂದ್ರಪ್ರಸ್ಥ ವಿದ್ಯಾಲಯದ 14ರ ವಯೋಮಾನದ ಬಾಲಕರ ತ್ರೋಬಾಲ್ ತಂಡ ಮೈಸೂರು ವಿಭಾಗೀಯ ಮಟ್ಟಕ್ಕೆ

0

ಉಪ್ಪಿನಂಗಡಿ : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬೆಳ್ತಂಗಡಿ ನಾರಾವಿ ಸಂತ ಪಾವ್ಲರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ತಂಡದಲ್ಲಿ ೭ನೇ ತರಗತಿಯ ಚಿಂತನ್ ಕೆ.ಸಿ, ಕವೀಶ್ ಬಿ.ಕೆ, ಸಮೃದ್ಧ್ ರೈ, ಶ್ರೀಹಾನ್, ಕೌಶಲ್ ಎ, ಎಂ.ಕೆ ಮೊಹಮ್ಮದ್ ಅರ್ಫಾದ್, ಇಮಾಮ್ ಅಹಮದ್, ೬ನೇ ತರಗತಿಯ ಸಮೃದ್ಧ ಜೈನ್, ಆಯತ್ತುಲ್ಲಾ ಸಲೀಂ, ೮ನೇ ತರಗತಿಯ ಅಕ್ಷಜ್ ಶೆಟ್ಟಿ, ಆಕಾಶ್ ತಂಡದಲ್ಲಿ ಭಾಗವಹಿಸಿರುತ್ತಾರೆ. ಸವ್ಯಸಾಚಿ ಆಟಗಾರರಾಗಿ ೮ನೇ ತರಗತಿಯ ಅಕ್ಷಜ್ ಶೆಟ್ಟಿ ಹಾಗೂ ೭ನೇ ತರಗತಿಯ ಚಿಂತನ್ ಆಯ್ಕೆಯಾಗಿರುತ್ತಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ, ರಾಷ್ಟ್ರಮಟ್ಟದ ತ್ರೋಬಾಲ್ ಆಟಗಾರ ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀರಂಜಿನಿ ತರಬೇತಿ ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here