ಕೊಣಾಲು ತಿರ್ಲೆ ದೇವಸ್ಥಾನದಲ್ಲಿ ಷಡಾಧಾರ ಪ್ರತಿಷ್ಠೆ

0

ನೆಲ್ಯಾಡಿ: ನವೀಕರಣಗೊಳ್ಳುತ್ತಿರುವ ಕಡಬ ತಾಲೂಕು ಕೊಣಾಲು ಗ್ರಾಮದ ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಷಡಾಧಾರ ಪ್ರತಿಷ್ಠೆ ಸೆ.10ರಂದು ಬೆಳಿಗ್ಗೆ ವೃಶ್ಚಿಕ ಲಗ್ನದಲ್ಲಿ ನಡೆಯಿತು.



ಸೆ.೯ರಂದು ಸಂಜೆ ದೇವತಾಪ್ರಾರ್ಥನೆ, ಷಡಾಧಾರ ಅಧಿವಾಸ, ಮಹಾಪೂಜೆ ನಡೆಯಿತು. ಸೆ.1೦ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ೧೧ರಿಂದ ೧೨.೧೫ರ ವೃಶ್ಚಿಕ ಲಗ್ನ ಶುಭ ಮುಹೂರ್ತದಲ್ಲಿ ಷಡಾಧಾರ ಪ್ರತಿಷ್ಠೆ ನಡೆಯಿತು. ಷಡಾಧಾರ ಪ್ರತಿಷ್ಠೆಯ ಸಮಯದಲ್ಲಿ ಭಕ್ತರು ನಿಧಿಕುಂಭ ಸ್ಥಾಪನೆಗೆ ಚಿನ್ನ,ಬೆಳ್ಳಿ, ನವರತ್ನ ಸಮರ್ಪಣೆ ಮಾಡಿದರು. ಮಧ್ಯಾಹ್ನ ಮಹಾಪೂಜೆ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ದೇವಸ್ಥಾನದ ಆಡಳಿತ ಧರ್ಮದರ್ಶಿ ಮಾಧವ ಸರಳಾಯ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಿವಾನಂದ ಕಾರಂತ, ಗೌರವಾಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ಕಾರ್ಯದರ್ಶಿ ಅಜೇಯರಾಜ್ ಸರಳಾಯ, ಅರುಣ್‌ರಾಜ್ ಸರಳಾಯ, ಉಪಾಧ್ಯಕ್ಷರಾದ ನೋಣಯ್ಯ ಪೂಜಾರಿ ಅಂಬರ್ಜೆ, ಸದಾನಂದ ಗೌಡ ಡೆಬ್ಬೇಲಿ, ನೋಣಯ್ಯ ಗೌಡ ಡೆಬ್ಬೇಲಿ, ಜೊತೆ ಕಾರ್ಯದರ್ಶಿ ಜಯಂತ ಅಂಬರ್ಜೆ, ಲೋಕೇಶ್ ಅಗರ್ತ, ಹರೀಶ್ ಶೆಟ್ಟಿ ಪಾತೃಮಾಡಿ, ರಾಜಶೇಖರ ಹೊಸಮನೆ, ಸುಂದರ ಶೆಟ್ಟಿ ಪುರ, ಪ್ರವೀಣ್ ಭಂಡಾರಿ ಸೇರಿದಂತೆ ನೂರಾರು ಮಂದಿ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here