ಗ್ರಾಮ ವಾಸ್ತವ್ಯಕ್ಕೆ ಬರುವ ಅಧಿಕಾರಿಗಳು ಈ ರಸ್ತೆ ಗಮನಿಸಿ-ಮುರ ನಿವಾಸಿಗಳ ಆಗ್ರಹ

0

ಪುತ್ತೂರು: ಸೆ.17ರಂದು ಕಬಕ ಗ್ರಾಮದ ಮುರದಲ್ಲಿರುವ ಗೌಡ ಸಮುದಾಯ ಭವನದಲ್ಲಿ ನಡೆಯಲಿರುವ ಜಿಲ್ಲಾಽಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾಮದ ಸಮಸ್ಯೆಗಳನ್ನು ಆಲಿಸುವ ಅಽಕಾರಿಗಳು ಅಂತರ್ ತಾಲೂಕುಗಳನ್ನು ಸಂಪರ್ಕಿಸುವ ಮುರ – ಪೇರಮೊಗ್ರು ಕೆಟ್ಟು ಹೋದ ರಸ್ತೆಯನ್ನು ಗಮನಿಸುವಂತೆ ಮುರ ನಿವಾಸಿಗಳು ಆಗ್ರಹಿಸಿದ್ದಾರೆ.

ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಲ್ಲಿ ಕಳೆದ ಆರು ತಿಂಗಳ ಹಿಂದೆ ನಡೆದ ಡಾಮರು ರಸ್ತೆ ಇದೀಗ ಪೂರ್ಣ ಕೆಟ್ಟು ಹೋಗಿದೆ.ಹಾಗಾಗಿ ಅಧಿಕಾರಿಗಳು,ಗ್ರಾಮ ವಾಸ್ತವ್ಯದ ಜೊತೆಗೆ ಅಲ್ಲಿಂದ ನೂರು ಮೀಟರ್ ದೂರ ಇರುವ ರಸ್ತೆಯನ್ನು ನೋಡಿ ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸುವಂತೆ ಗ್ರಾಮಸ್ಥರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here