ಪಡ್ನೂರು ಪಟ್ಟೆ ಸೇಸಮ್ಮರರಿಗೆ ಶ್ರದ್ಧಾಂಜಲಿ

0

ಪುತ್ತೂರು : ಪಡ್ನೂರು ಗ್ರಾಮದ ಪಟ್ಟೆ ಸೇಸಮ್ಮರರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಪಟ್ಟೆ ಮನೆಯಲ್ಲಿ ನಡೆಯಿತು. ಸವಣೂರು ಸಿಎ ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಗೌಡ ಮತ್ತು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳರವರು ನುಡಿನಮನ ಸಲ್ಲಿಸಿದರು.

 

ಬಳಿಕ ಮೃತರ ಭಾಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಲಾಯಿತು. ಮೃತರ ಪುತ್ರರಾದ ಅಬಕಾರಿ ಇಲಾಖೆಯ ನಿವೃತ್ತ ಇನ್‌ಸ್ಪೆಕ್ಟರ್ ವಿಶ್ವನಾಥ ಗೌಡ ನೈತ್ತಾಡಿ ಕಲ್ಲುಗುಡ್ಡೆ, ಕೃಷಿಕ ಕೃಷ್ಣಪ್ಪ ಗೌಡ ಕೊಕ್ಕಡ, ಪುತ್ತೂರು ಖಾಸಗಿ ಬಸ್ ಏಜೆಂಡ್ ದಾಮೋದರ ಗೌಡ ಕಲ್ಲಡ್ಕ, ಸಂತೋಷ್ ವೈನ್‌ಶಾಪ್ ಸಿಬಂದಿ ಗಣೇಶ್ ಗೌಡ ಪಟ್ಟೆ, ಇಲೆಕ್ಟ್ರಾನಿಕ್ಸ್ ಮೆಕಾನಿಕ್ ಉದ್ಯೋಗಿ ವಿನೋದ್ ಗೌಡ ಪಟ್ಟೆ, ಕಿರಣ್ ಎಂಟರ್‌ಪ್ರೈಸಸ್ ಸಿಬಂದಿ ರಾಜೇಶ್ ಗೌಡ ಪಟ್ಟೆ, ಪುತ್ರಿ ಕುಸುಮಾವತಿ ಬೆಳ್ಳಿಪ್ಪಾಡಿ ಅಲಿಂಜ, ಅಳಿಯ ಅರಣ್ಯ ಇಲಾಖೆಯ ನಿವೃತ್ತ ರಕ್ಷಕ ಮೋನಪ್ಪ ಗೌಡ ಬೆಳ್ಳಿಪ್ಪಾಡಿ ಅಲಿಂಜ, ಸೊಸೆ ಶಿಕ್ಷಕಿ ರೇವತಿ, ಸಾವಿತ್ರಿ, ಚಂದ್ರಾವತಿ, ಜ್ಯೋತಿ, ರಮ್ಯಾ, ಜಯಶ್ರೀ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಬಂಧುಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here