ರೋಟರಿ ಯುವ, ಉಷಾ ಪಾಲಿ ಕ್ಲಿನಿಕ್ ಸಹಯೋಗದಲ್ಲಿ ಉಚಿತ ಹೃದ್ರೋಗ ತಪಾಸಣಾ ಶಿಬಿರ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಉಷಾ ಪಾಲಿಕ್ಲಿನಿಕ್ ಸಹಯೋಗದೊಂದಿಗೆ ಸೆ.೨೮ರಂದು ದರ್ಬೆ ಉಷಾ ಪಾಲಿ ಕ್ಲಿನಿಕ್‌ನಲ್ಲಿ ಉಚಿತ ಹೃದ್ರೋಗ ತಪಾಸಣಾ ಶಿಬಿರ ನಡೆಯಿತು. ಪುತ್ತೂರು ದರ್ಬೆಯಲ್ಲಿರುವ ಶ್ರೀರಾಮ ಸೌಧ ವಾಣಿಜ್ಯ ಸಂಕೀರ್ಣದಲ್ಲಿರುವ ಎಸ್‌ಆರ್ ಬಿಲ್ಡರ್ಸ್ ಮಾಲಕ ಶಿವಪ್ರಸಾದ್ ಇಜ್ಜಾವು ಶಿಬಿರ ಉದ್ಘಾಟಿಸಿ ಶುಭಹಾರೈಸಿದರು. ಉಡುಪಿಯ ಆದರ್ಶ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ವಿಶುಕುಮಾರ್ ಉಚಿತ ತಪಾಸಣಾ ಶಿಬಿರ ನಡೆಸಿ ಪದೇಪದೇ ಎದೆನೋವು ಅಥವಾ ಎದೆಉರಿ ಕಂಡುಬಂದಲ್ಲಿ ಗ್ಯಾಸ್ಟಿಕ್ ಸಮಸ್ಯೆ ಎಂದು ತಿಳಿದು ನಿರ್ಲಕ್ಷ ತೋರದೆ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಂಡಲ್ಲಿ ಮುಂದೆ ನಡೆಯುವ ಅನಾಹುತ ತಪ್ಪಿಸಬಹುದು ಎಂದು ವೈದ್ಯ ಡಾ. ವಿಶು ಕುಮಾರ್ ತಿಳಿಸಿ ಸಾರ್ವಜನಿಕರ ಸೇವೆಗಾಗಿ ಪ್ರತಿ ಬುಧವಾರ ಸೇವೆಗೆ ಲಭ್ಯ ಎಂದು ತಿಳಿಸಿದರು. ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿರುವ ಅನೇಕರು ಈ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಂಡರು.

ಉಷಾ ಮೆಡಿಕಲ್ಸ್‌ನ ಮಾಲಕ ಗಣೇಶ್ ಭಟ್, ಶಿವಂ ಕಂಪ್ಯೂಟರ್ಸ್‌ನ ಸುದರ್ಶನ್ ರೈ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ರಾಜೇಶ್ವರಿ ಆಚಾರ್ಯ ಸ್ವಾಗತಿಸಿದರು. ತ್ರಿವೇಣಿ ಗಣೇಶ್ ವಂದಿಸಿದರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here