ಗಾಂಧಿ ಜಯಂತಿ ಪ್ರಯುಕ್ತ ರೋಟರಿ ಯುವದಿಂದ ಗಾಂಧಿ ಮಂಟಪದ ಸ್ವಚ್ಛತಾ ಕಾರ್ಯ ಮತ್ತು ನೀರಿನ ಫಿಲ್ಟರ್ ಕೊಡುಗೆ

0

ಅ. 2. ಗಾಂಧಿ ಜಯಂತಿ ಪ್ರಯುಕ್ತ ಪುತ್ತೂರಿನ ಬಿರುಮಲೆಗುಡ್ಡದಲ್ಲಿರುವ ಗಾಂಧಿಮಂಟಪ ಹಾಗೂ ಪ್ರಜ್ಞಾ ಆಶ್ರಮದ ಸುತ್ತಮುತ್ತ ಇಂದು ಬೆಳ್ಳಿಗ್ಗೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಇದೇ ಸಂದರ್ಭದಲ್ಲಿ ರೋಟರಿ ಯುವದ ವತಿಯಿಂದ ಜಲಸಿರಿ ಯೋಜನೆ ಅಡಿಯಲ್ಲಿ ಪ್ರಜ್ಞಾ ಆಶ್ರಮಕ್ಕೆ ಕುಡಿಯುವ ನೀರಿನ ಫಿಲ್ಟರ್ ನ್ನು ಕೂಡ ಕೊಡುಗೆಯಾಗಿ ನೀಡಲಾಯಿತು. ಈ ಕಾರ್ಯ ಕ್ರಮದಲ್ಲಿ ರೋಟರಿ ಯುವದ ಅಧ್ಯಕ್ಷೆ ರಾಜೇಶ್ವರಿ ಆಚಾರ್, ಕಾರ್ಯದರ್ಶಿ ಅಶ್ವಿನಿ ಕ್ರಷ್ಣ ಮುಳಿಯ , ವಲಯ ಸೇನಾನಿ ಹರ್ಷ ಕುಮಾರ್ ರೈ , ಮತ್ತು ಸದಸ್ಯರುಗಳಾದ ಉಮೇಶ್ ನಾಯಕ್ , ನರಸಿಂಹ ಪೈ , ಪಶುಪತಿ ಶರ್ಮ , ಅನಿಲ ದೀಪಕ್ ರೈ , ತ್ರಿವೇಣಿ , ಅಭಿಷ್, ಡಾ.ಯಧುರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕ್ಲಬ್ ಅಧ್ಯಕ್ಷರು ಮಾತನಾಡಿ ಈ ಸ್ವಚ್ಛತಾ ಅಭಿಯಾನ ಇಂದು ಮಾತ್ರ ಸೀಮಿತವಾಗದೆ ನಿರಂತರವಾಗಿ ರೋಟರಿ ಯುವದಿಂದ ನಡೆಯಲಿದೆ ಎಂದರು.

LEAVE A REPLY

Please enter your comment!
Please enter your name here