ಪುತ್ತೂರು: ಪುತ್ತೂರು ಸೀರತ್ ಕಮಿಟಿ ವತಿಯಿಂದ ಅ. 26ರಂದು ಸೀರತ್ ಕಚೇರಿಯಲ್ಲಿ ಮಿಲಾದ್ನ್ನೆಬಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಸೀರತ ಕಮಿಟಿಯ ಅಧ್ಯಕ್ಷ ಸುರಯ್ಯ ಅಬ್ದುಲ್ ಖಾದರ್ ಹಾಜಿ ವಹಿಸಿದ್ದರು. ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಅಲಹಾಜ್ ಅಬ್ಬಾಸ್ ಫೈಝಿ ಪುತ್ತಿಗೆರವರು ದುವಾ ಆಶೀರ್ವಚನ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಹಮ್ಮದ್ ಪೈಗಂಬರ್ರವರ ಮಹತ್ವ ಹಾಗೂ ಅವರು ತೋರಿದ ಸನ್ಮಾರ್ಗದ ಬಗ್ಗೆ ವಿವರಿಸಿ ಅವರ ನಡೆ ನುಡಿ ನಮಗೆಲ್ಲ ದಾರಿದೀಪವಾಗಿದೆ. ಅವರು ತೋರಿದ ಹಾಗೂ ನಡೆದ ಹಾದಿಯನ್ನು ನಾವು ಜೀವದಲ್ಲಿ ಅಳವಡಿಸಿಕೊಂಡು ಬಂದಲ್ಲಿ ಇಹ ಮತ್ತು ಪರಲೋಕದಲ್ಲಿ ವಿಜಯಶೀಲರಾಗಲಿದ್ದೇವೆ ಎಂದು ಅವರು ಹೇಳಿದರು.
ಪುತ್ತೂರು ಮೌಂಟನ್ವ್ಯೂ ಶಿಕ್ಷಣ ಸಂಸ್ಥೆಯ ಅಧ್ಯಾಪಕ ಕೆ. ಎಂ. ಎ ಕೊಡುಂಗೈ ಮತ್ತು ಬೊಳುವಾರು ಮಸೀದಿಯ ಖತೀಬ್ ಅಬ್ದುಲ್ ಖರೀಮ್ ಧಾರಿಮಿ ಮಾತನಾಡಿ, ವಿಶ್ವ ವಿಮೋಚಕರಾದ ಪ್ರವಾದಿ ಮಹಮ್ಮದ್ ಪೈಗಂಬರ್ರವರು ಜಗತ್ತು ಕಂಡ ಮಹಾನ್ ಮಾನವತಾವಾದಿ ಆಗಿದ್ದಾರೆ. ಅವರು ತೋರಿದ ಹಾದಿಯಲ್ಲಿ ಮುನ್ನಡೆಯುವ ಮೂಲಕ ನಾವು ಪಾವನರಾಗಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಯು. ಅಬ್ದುಲ್ಲಾ ಹಾಜಿ ಸಾಲ್ಮರ, ಅಬ್ದುಲ್ ರಹಿಮಾನ್ ಅಝಾದ್ ದರ್ಬೆ, ಬಪ್ಪಳಿಗೆ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್ ಲವ್ಲಿ, ಹಸೈನಾರ್ ಹಾಜಿ ಸಿಟಿ ಬಝಾರ್, ಅಬ್ದುಲ್ ಲತೀಫ್ ದರ್ಬೆ, ಅಬ್ಬಾಸ್ ಮುಸ್ಲಿಯಾರ್, ಮಹಮ್ಮದ್ ಶರೀಫ್ ಸಾಲ್ಮರ, ಇಬ್ರಾಹಿ ಮುಸ್ಲಿಯಾರ್ ಸಾಲ್ಮರ, ಅನ್ವರ್ ಸಾದಾತ್ ಮುಸ್ಲಿಯಾರ್ ಮೊಟ್ಟೆತ್ತಡ್ಕ, ಶೇಖ್ ಜೈನುದ್ದೀನ್, ಶರೀಫ್ ಮುಕ್ರಂಪಾಡಿ, ಇಸ್ಮಾಯಿಲ್ ಸಾಲ್ಮರ, ಅಶ್ರಫ್, ನ್ಯಾಯಾವಾದಿ ಕೆ.ಎಂ. ಸಿದ್ದಿಕ್, ಜುಬೈರ್ ಬಪ್ಪಳಿಗೆ, ಸೂಫಿ ಪಡೀಲ್, ಅಬ್ದುಲ್ ರಜಾಕ್ ಆರ್.ಪಿ., ಅಬ್ದುಲ್ ಹಮೀದ್ ಕಾರ್ಜಾಲು, ಪಿ.ಬಿ. ಅಬ್ದುಲ್ಲಾ ಬಪ್ಪಳಿಗೆ, ಹಕೀಂ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು. ಪ್ರ. ಕಾರ್ಯದರ್ಶಿ ಬಿ.ಎ ಶಕೂರ್ ಹಾಜಿ ಕಲ್ಲೇಗ ಸ್ವಾಗತಿಸಿ, ಖಜಾಂಜಿ ಎಲ್.ಟಿ ಅಬ್ದುಲ್ ರಝಾಕ್ ಹಾಜಿ ವಂದಿಸಿದರು. ಕಾರ್ಯದರ್ಶಿ ನ್ಯಾಯಾವಾದಿ ನೂರೂದ್ದೀನ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.