ಲಕ್ಷ್ಮೀ ಮೊಬೈಲ್ಸ್ ಸೇಲ್ಸ್, ಸರ್ವೀಸ್ ಸಂಸ್ಥೆ ಶುಭಾರಂಭ

0

ಶುಭಾರಂಭ ಪ್ರಯುಕ್ತ ಮೊಬೈಲ್‌ ಸರ್ವೀಸಸ್ ಸಂಪೂರ್ಣ ಉಚಿತ…!

ಪುತ್ತೂರು : ಕೆಎಸ್ಆರ್‌ಟಿಸಿ ವಾಣಿಜ್ಯ ಸಂಕೀರ್ಣದ  ಮುಂಭಾಗದಲ್ಲಿರುವ ಎ.ಎಂ. ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಭರತ್ ಕುಮಾರ್ ಅಲ್ಬುಂಡರವರ ಮಾಲಕತ್ವದ ಹೆಸರಾಂತ ಕಂಪೆನಿಯ ಹಾಗೂ ಅದೇ ರೀತಿ ಗುಣಮಟ್ಟದ ಬಿಡಿಭಾಗಗಳನ್ನೊಳಗೊಂಡ ವಿನೂತನ ಮಳಿಗೆ ಲಕ್ಷ್ಮೀ ಮೊಬೈಲ್ಸ್ ಆ್ಯಂಡ್ ಸೇಲ್ಸ್ ಸರ್ವೀಸ್ ಡಿ.8 ಶುಭಾರಂಭಗೊಂಡಿತು.

ಮಳಿಗೆಯನ್ನು ಮಾಲಕರ ತಂದೆ ಲಕ್ಷ್ಮಣ ಗೌಡ ಅಲ್ಬುಂಡ ದೀಪ ಪ್ರಜ್ವಲನೆ ನೆರವೇರಿಸುವ ಮೂಲಕ ಉದ್ಘಾಟಿಸಿ, ಗುಣಮಟ್ಟದ ಸೇವೆ ಹಾಗೂ ಪ್ರಾಮಾಣಿಕ ರೀತಿಯ ವ್ಯವಹಾರ ಮೂಲಕ ಸಂಸ್ಥೆ ಗ್ರಾಹಕ ವರ್ಗದ ಮನ ಸೆಳೆದು, ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು. 

ಕೇಶವ ಜಿ ಕೆ, ರಮೇಶ ಗೌಡ ಸಿಟಿ ಗುಡ್ಡೆ, ಯೋಗೀಶ ಗೌಡ ಸಿಟಿಗುಡ್ಡೆ, ಡಿ.ಕೆ.ಮೊಬೈಲ್ಸ್ ಮಾಲಕ ಸಂಪತ್ ಹಾಗೂ ಚಂದ್ರಹಾಸ ಸಹಿತ ಮತ್ತಿತರರು ಹಾಜರಿದ್ದರು.

ಮಾಲಕ ಭರತ್ ಕುಮಾರ್ ಮಾತನಾಡಿ, ಸುಮಾರು 12 ವರುಷಗಳ ಸುದೀರ್ಘ ಅನುಭವದ ಜೊತೆ, ಕಳೆದ 7 ವರ್ಷಗಳಿಂದ ಇದೇ ಸಂಕೀರ್ಣದಲ್ಲಿ ಮೊಬೈಲ್ ಟ್ರೀಟ್ ಸಂಸ್ಥೆಯನ್ನು ನಡೆಸುತ್ತ, ಇದೀಗ ಹೊಸ ನಾಮಕರಣದೊಂದಿಗೆ ವಿನೂತನ ಸಂಸ್ಥೆಯನ್ನೂ ಆರಂಭಿಸಿದ್ದೇನೆ, ಎಂದಿನಂತೆ ಗ್ರಾಹಕರ ಸಹಕಾರವಿರಲಿ. ನಮ್ಮಲ್ಲಿ ಎಲ್ಲಾ ಪ್ರಮುಖ ಕಂಪೆನಿಯ ಅತ್ಯುತ್ತಮ ಮೊಬೈಲ್‌ಗಳು ಜೊತೆಗೆ ಗುಣಮಟ್ಟದ ಬಿಡಿಭಾಗಗಳು ಲಭ್ಯವಿದ್ದು , ಶುಭಾರಂಭದ ಪ್ರಯುಕ್ತ ಕೆಲ ದಿನಗಳವರೆಗೆ ಯಾವುದೇ ಮೊಬೈಲ್ ಸರ್ವಿಸ್ ಮೇಲೆ ಸರ್ವಿಸ್ ಚಾರ್ಜ್ ಸಂಪೂರ್ಣ ಉಚಿತವಾಗಿದ್ದು, ಮೊಬೈಲ್ ಪ್ರಿಯರು ಈ ಕೊಡುಗೆಯ ಲಾಭ ಪಡೆದುಕೊಳ್ಳುವಂತೆ ತಿಳಿಸಿ, ಎಲ್ಲರ ಸಹಕಾರ ಕೋರಿ, ವಂದಿಸಿದರು.

LEAVE A REPLY

Please enter your comment!
Please enter your name here