ಗೋಳಿತ್ತಡಿ: ‘ಈಟ್ ಎನ್ ಜಾಯ್’ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

0

ರಾಮಕುಂಜ: ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಆತೂರು ಸಮೀಪದ ಗೋಳಿತ್ತಡಿ ಜಂಕ್ಷನ್‌ನಲ್ಲಿ ’ಈಟ್ ಎನ್ ಜಾಯ್’ ಮಾಂಸಹಾರಿ ಹಾಗೂ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್ ಡಿ.19ರಂದು ಶುಭಾರಂಭಗೊಂಡಿತು.


ಬೆಳ್ತಂಗಡಿ ದಾರುಸ್ಸಲಾಂ ಕಾಲೇಜಿನ ನಿರ್ದೇಶಕರಾದ ಝೈನ್‌ಲಾಬಿದಿನ್ ಜಿಫ್ರಿ ತಂಳ್‌ರವರು ದುವಾಶೀರ್ವಚನ ನೀಡಿದರು. ಹೆದ್ದಾರಿಗೆ ಹೊಂದಿಕೊಂಡು ಗೋಳಿತ್ತಡಿ ಜಂಕ್ಷನ್‌ನಲ್ಲಿ ಫ್ಯಾಮಿಲಿ ರೆಸ್ಟೋರೆಂಟ್ ಅತ್ಯವಶ್ಯಕವಾಗಿತ್ತು. ’ಈಟ್ ಎನ್ ಜಾಯ್’ ಫ್ಯಾಮಿಲಿ ರೆಸ್ಟೋರೆಂಟ್ ಹಸಿದು ಬಂದವರಿಗೆ ಉತ್ತಮ ಸೇವೆ ನೀಡುವ ಮೂಲಕ ಗ್ರಾಹಕರನ್ನು ಸಂತುಷ್ಟಗೊಳಿಸಲಿ. ಎಲ್ಲರಿಗೂ ಸದಭಿರುಚಿಯ ಸೇವೆ ನೀಡುವ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸುವುದರೊಂದಿಗೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹೇಳಿದ ಝೈನ್‌ಲಾಬಿದಿನ್ ಜಿಫ್ರಿ ತಂಳ್‌ರವರು ಶುಭಹಾರೈಸಿದರು. ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಮಹಮ್ಮದ್ ಜುನೈದ್ ಜಿಫ್ರಿ ತಂಳ್ ಸೇರಿದಂತೆ ಹಲವು ಮಂದಿ ಭೇಟಿ ನೀಡಿ ಶುಭಕೋರಿದರು. ಫ್ಯಾಮಿಲಿ ರೆಸ್ಟೋರೆಂಟ್ ಮಾಲಕ ಅಝೀಝ್ ಕಿಡ್ಸ್‌ರವರು ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ, ನಮ್ಮಲ್ಲಿ ಚಿಕನ್ ಬಿರಿಯಾನಿ, ನೂಡಲ್ಸ್, ಚಿಕನ್ ಟಿಕ್ಕ ಸೇರಿದಂತೆ ವಿವಿಧ ಮಾಂಸಹಾರಿ ಹಾಗೂ ಸಸ್ಯಹಾರಿ ಖಾದ್ಯಗಳು ಲಭ್ಯವಿದೆ. ಶುಭಾರಂಭದ ಪ್ರಯುಕ್ತ ಡಿ.19ರಿಂದ 7 ದಿನಗಳ ಕಾಲ ಕೊಂಬೊ ಮೇಲೆ ಹಾಗೂ ಮೆನು ಬೆಲೆಯಲ್ಲಿ ಶೇ.10ರಷ್ಟು ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಂಡು ನಮ್ಮನ್ನು ಪ್ರೋತ್ಸಾಹಿಸುವಂತೆ ಹೇಳಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here