ಫೆ. 1ಕ್ಕೆ ಪರ್ಲಡ್ಕ ಬಾಲವನದಲ್ಲಿ ಯಕ್ಷ ರಂಗಾಯಣದ ಪರಶುರಾಮ ನಾಟಕ – ಉಚಿತ ಪ್ರವೇಶ

0

ಪುತ್ತೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ಆಯುಕ್ತರ ಕಚೇರಿ ಪುತ್ತೂರು, ಡಾ.ಶಿವರಾಮ ಕಾರಂತ ಬಾಲವನ ಇದರ ಆಶ್ರಯದಲ್ಲಿ, ಪುತ್ತೂರು ಪರ್ಲಡ್ಕದಲ್ಲಿರುವ ಬಾಲವನದಲ್ಲಿ ಫೆ.1 ರಂದು ಸಂಜೆ ಗಂಟೆ 6.45 ಕ್ಕೆ ಯಕ್ಷ ರಂಗಾಯಣ ಕಾರ್ಕಳ ಇದರ ರೆಪರ್ಟರಿ ಕಲಾವಿದರು ಅಭಿನಯಿಸುವ ’ಪರಶುರಾಮ’ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.


ಶಶಿರಾಜ್ ಕಾವೂರು ರಚಿಸಿದ ಈ ನಾಟಕವನ್ನು ಡಾ|| ಜೀವನ್ ರಾಂ ಸುಳ್ಯ ನಿರ್ದೇಶಿಸಿದ್ದಾರೆ. ತುಳುನಾಡಿನ ಸೃಷ್ಟಿಕರ್ತನೆಂದೇ ಕರಾವಳಿಯಲ್ಲಿ ಕರೆಯಲ್ಪಡುವ ಪರಶುರಾಮನ ಕಥೆಯನ್ನು ಅದ್ಭುತವಾದ ರಂಗಾಭಿನಯ, ವಿಶೇಷ ರಂಗವಿನ್ಯಾಸ, ಸಂಗೀತ, ಬೆಳಕು ಸಂಯೋಜನೆ ಇತ್ಯಾದಿಗಳಿಂದ ಬಹಳ ವಿಭಿನ್ನವಾಗಿ ಹೆಣೆಯಲಾಗಿದೆ. ಸಮಯಕ್ಕೆ ಸರಿಯಾಗಿ ನಡೆಯುವ ಈ ನಾಟಕಕ್ಕೆ ಉಚಿತ ಪ್ರವೇಶವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸಬೇಕೆಂದು ಎಂದು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here