ಶ್ರೀನಿಧಿ ಸೇವಾ ಟ್ರಸ್ಟ್‌ನಿಂದ ಧನಸಹಾಯ, ಆಹಾರ ಸಾಮಾಗ್ರಿ ವಿತರಣೆ

0

ಪುತ್ತೂರು: ಪುತ್ತೂರು ಶ್ರೀನಿಧಿ ಸೇವಾ ಟ್ರಸ್ಟ್ ವತಿಯಿಂದ ಕ್ಯಾನ್ಸರ್, ಹೃದಯರೋಗ, ಕಿಡ್ನಿವೈಫಲ್ಯದಿಂದ ಬಳಲುತ್ತಿರುವ ತೀವ್ರ ತೊಂದರೆಗೀಡಾದವರಿಗೆ (ನೊಂದವರ ಪಾಲಿಗೆ) ಧನಸಹಾಯ ಮತ್ತು ಆಹಾರ ಸಾಮಾಗ್ರಿ ವಿತರಣಾ ಕಾರ್ಯಕ್ರಮ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆಯಿತು. ವಕೀಲರುಗಳಾದ ಗೌರೀಶ್‌ಚಂದ್ರ ಶಾನ್‌ಬೋಗ್ ಮತ್ತು ನಿರ್ಮಲ್ ಕುಮಾರ್ ಜೈನ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿ ಸಂಶುದ್ದೀನ್ ಮಾತನಾಡಿ ಜನರ ಸೇವೆ, ನೊಂದವರಿಗೆ ಸಹಾಯ ಪುಣ್ಯದ ಕೆಲಸ, ಜನರ ನೋವು, ಕಷ್ಟಗಳಿಗೆ ಸ್ಪಂದಿಸುವ ಇಂತಹ ಮನೋಭಾವ ಎಲ್ಲರಲ್ಲಿಯೂ ಮೂಡಿ ಬರಬೇಕಾಗಿದೆ ಎಂದರು. ಲಕ್ಷಣ ಸ್ವಾಗತಿಸಿ ಪ್ರಿಯ ಪ್ರಾರ್ಥಿಸಿದರು. ಇಂದಿರ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿಧಿ ಸೇವಾಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here