ಕಡಬ: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಜರಗಿದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ 14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ದ.ಕ.ಜಿಲೆಯನ್ನು ಪ್ರತಿನಿಧಿಸಿದ 4*100ಮೀಟರ್ ರಿಲೇಯಲ್ಲಿ ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ
ವಿದ್ಯಾರ್ಥಿನಿ ನವ್ಯಾ (ಬಿಜೇರು ಮನೆ ಶ್ರೀಧರ್ ಗೌಡ ಮತ್ತು ಲೋಲಾಕ್ಷಿ ದಂಪತಿ ಪುತ್ರಿ), ಧೃತಿ ಕೆ.ರೈ (ಅಮೈ ಮನೆ ಕರುಣಾಕರ ರೈ ಮತ್ತು ವಿಜಯಲಕ್ಷಿ ರೈ ದಂಪತಿ ಪುತ್ರಿ) ತೀಕ್ಷ ಎಸ್. (ಮೇಲಿನ ಮನೆ ಸತೀಶ್ ನಾಯ್ಕ್ ಮತ್ತು ಶಾಲಿನಿ ಸತೀಶ್ ದಂಪತಿ ಪುತ್ರಿ), ಫಾತಿಮಾ ಫಿದಾ (ಅಶ್ರಫ್ ಮತ್ತು ಸಫಿಯಾ ದಂಪತಿ ಪುತ್ರಿ) ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ಡಿಂಪಲ್ ಶೆಟ್ಟಿ, ಕೃತಿ ಅವರು ಚಿನ್ನದ ಪದಕವನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಶಾಲೆಯಲ್ಲಿ ಜರಗಿದ ಅಭಿನಂದನ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳು ಮತ್ತು ತರಬೇತಿಗೊಳಿಸಿದ ದೈಹಿಕ ಶಿಕ್ಷಕರನ್ನು ಶಾಲಾ ಸಂಚಾಲಕ ವಂ| ಅರುಣ್ ವಿಲ್ಸನ್ ಲೋಬೋ ಮತ್ತು ಪ್ರಾಂಶುಪಾಲ ವಂ| ಅಮಿತ್ ಪ್ರಕಾಶ್ ರೋಡ್ರಿಗಸ್ ಅವರು ಅಭಿನಂದಿಸಿದರು.