ಪೊಲೀಸ್ ಅಧಿಕಾರಿ, ನೋಡಲ್ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ವಿಶೇಷ ಕಾರ್ಯಾಗಾರ

0

ಪುತ್ತೂರು:ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ, ಚುನಾವಣೆಗೆ ಸಂಬಂದಿಸಿ ಕರ್ತವ್ಯ ನಿರ್ವಹಿಸುವ ನೋಡಲ್ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಚುನಾವಣೆ ಕರ್ತವ್ಯಗಳಿಗೆ ಸಂಬಂದಿಸಿದ ವಿಶೇಷ ಕಾರ್ಯಾಗಾರ ನಡೆಸಲಾಯಿತು.

ಚುನಾವಣೆಗೆ ಸಂಬಂದಿಸಿ ಕರ್ತವ್ಯಗಳು ಹಾಗೂ ಸಿದ್ಧತೆಗಳು, ಚುನಾವಣೆ ದೃಷ್ಟಿಯಿಂದ ತೆಗೆದು ಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳು, ಚುನಾವಣೆಗೆ ಸಂಬಂದಿಸಿದ ಕಾನೂನುಗಳು ಚುನಾವಣೆ ನೀತಿ ಸಂಹಿತೆ ಇತ್ಯಾದಿ ವಿಷಯಗಳ ಮಾಹಿತಿ ನೀಡಲಾಯಿತು.ದ.ಕ.ಜಿಲ್ಲಾ ಎಸ್‌ಪಿ ಡಾ|ಅಮಾಟೆ ವಿಕ್ರಂ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ, ಬಂಟ್ವಾಳ ಉಪ ವಿಭಾಗ ಡಿವೈಎಸ್‌ಪಿ ಪ್ರತಾಪ್ ತೋರಟ್, ಆಅಖಃ ಡಿವೈಎಸ್‌ಪಿ ಡಾ| ಗಾನ ಪಿ. ಕುಮಾರ್, ಪುತ್ತೂರು ಉಪವಿಭಾಗ ಡಿವೈಎಸ್‌ಪಿ ಡಾ| ವೀರಯ್ಯ ಹಿರೇಮಠ್ ಉಪಸ್ಥಿತರಿದ್ದರು.

ಕ್ಯಾರಾಫ್ ಕರುಣಾಕರ್
ಫೊಟೊ ಟುಡೆ ತರಬೇತಿ

LEAVE A REPLY

Please enter your comment!
Please enter your name here