ಬೆಟ್ಟಂಪಾಡಿ ದೇವಿಕೃಪಾ ಮನೆಯಲ್ಲಿ ನಾಗಪ್ರತಿಷ್ಠೆ, ದೈವಗಳ ಪುನರ್‌ ಪ್ರತಿಷ್ಠೆ

0

ಬೆಟ್ಟಂಪಾಡಿ: ಬೆಟ್ಟಂಪಾಡಿ ಶ್ರೀದೇವಿಕೃಪಾ ಮನೆಯಲ್ಲಿ ಶ್ರೀ ನಾಗ ಪ್ರತಿಷ್ಟೆ, ಶ್ರೀ ಸತ್ಯದೇವತೆ (ಕಲ್ಲುರ್ಟಿ) ಮತ್ತು ಮಂತ್ರದೇವತೆ ದೈವಗಳ ಪುನರ್ ಪ್ರತಿಷ್ಠೆಯು
ವೇದಮೂರ್ತಿಗಳಾದ ಜಗದೀಶ ಬಟ್ರಪ್ಪಾಡಿ ಮತ್ತು ಅನಂತಕುಮಾರ್ ಓಜಾಳ ರವರ ನೇತೃತ್ವದಲ್ಲಿ ಏ. 2 ರಂದು ಜರಗಿತು.


ಏ. 1 ರಂದು ರಾತ್ರಿ ಶ್ರೀದೇವಿಗೆ ದುರ್ಗಾಪೂಜೆ, ದೈವಸ್ಥಾನದಲ್ಲಿ ಸ್ವಸ್ತಿ ಪುಣ್ಯಾಹವಾಚನ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಬಿಂಬ ಶುದ್ದಿ ನಡೆಯಿತು.
ಮಧ್ಯಾಹ್ನ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ ಮತ್ತು ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಶಿಕ್ಷಕರ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಅನ್ನಸಂತರ್ಪಣೆ ನೆರವೇರಿತು. ಬೆಟ್ಟಂಪಾಡಿ ವೆಂಕಟ್ರಾವ್ ಮತ್ತು ಸಹೋದರರು,‌ ಕುಟುಂಬಿಕರು, ಬಂಧು ಮಿತ್ರರು ಪಾಲ್ಗೊಂಡರು.

LEAVE A REPLY

Please enter your comment!
Please enter your name here