ಪುತ್ತೂರು ವಿಧಾನಸಭಾ ಚುನಾವಣಾ ವೀಕ್ಷಕ ಶಿವ್ ಸಾಯ ಅವಸ್ತಿ ತಾ|ಆಡಳಿತ ಸೌಧಕ್ಕೆ ಭೇಟಿ

0

ಪುತ್ತೂರು:ಪುತ್ತೂರು ವಿಧಾನಸಭೆ ಚುನಾವಣೆಗೆ ವೀಕ್ಷಕರಾಗಿ ನೇಮಕಗೊಂಡಿರುವ ಉತ್ತರ ಪ್ರದೇಶದ ಶಿವ್ ಸಾಯ ಅವಸ್ತಿ ಅವರು ಏ.20ರಂದು ತಾಲೂಕು ಆಡಳಿತ ಸೌಧಕ್ಕೆ ಭೇಟಿ ನೀಡಿದರು.

ಉತ್ತರ ಪ್ರದೇಶ ಸರಕಾರದ ಕೃಷಿ ನಿರ್ದೇಶನಾಲಯದ ವಿಶೇಷ ಕಾರ್ಯದರ್ಶಿಯಾಗಿರುವ ಅವರು ಪುತ್ತೂರು ವಿಧಾನಸಭಾ ಚುನಾವಣೆಗೆ ವಿಶೇಷ ವೀಕ್ಷಕರಾಗಿ ಆಯೋಗದಿಂದ ನೇಮಕಗೊಂಡಿದ್ದರು. ಪುತ್ತೂರುಗೆ ಆಗಮಿಸಿದ ಅವರನ್ನು ಪುತ್ತೂರು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿರುವ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್ ಮತ್ತು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಸ್ವಾಗತಿಸಿದರು.

LEAVE A REPLY

Please enter your comment!
Please enter your name here