ಹಳೆನೇರೆಂಕಿ: ಪರಿಸರ ದಿನಾಚರಣೆ, ಬೀಜ ಬಿತ್ತೋತ್ಸವ

0

ರಾಮಕುಂಜ: ಪಂಜ ವಲಯದ ನೆಲ್ಯಾಡಿ ಶಾಖೆಯ ಹಳೆನೇರೆಂಕಿ ಡೀಮ್ಡ್ ಫಾರೆಸ್ಟ್‌ನ ಇಜ್ಜಾವು ಅರಣ್ಯ ಪ್ರದೇಶದಲ್ಲಿ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಾಗೂ ಯೂತ್ ರೆಡ್‌ಕ್ರಾಸ್ ಘಟಕ, ಶೌರ್ಯ ತಂಡ ಧರ್ಮಸ್ಥಳ, ಸಿಂಗ್ಸ್ ಅಫ್ಫಾರೆಸ್ಟೇಷನ್ ಫಾರೆಸ್ಟ್ ಪ್ರಾಜೆಕ್ಟ್ಸ್ ಸಹಕಾರದೊಂದಿಗೆ ಅರಣ್ಯ ಇಲಾಖೆ ವತಿಯಿಂದ ಪರಿಸರ ದಿನಾಚರಣೆ ಮತ್ತು ಬೀಜ ಬಿತ್ತೋತ್ಸವ ಕಾರ್ಯಕ್ರಮ ಜರುಗಿತು.


ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ., ಉಪಾಧ್ಯಕ್ಷ ಪ್ರಶಾಂತ ಆರ್.ಕೆ,, ಉಪವಲಯ ಅರಣ್ಯಾಧಿಕಾರಿಗಳಾದ ಸುನೀಲಕುಮಾರ ಬಿ.ಯು., ದೇವಿಪ್ರಸಾದ್, ಅರಣ್ಯ ವೀಕ್ಷಕ ಜನಾರ್ದನ, ಮೆಸ್ಕಾಂ ಜೆಇ ಪ್ರೇಮ್‌ಕುಮಾರ್, ಪರಿಸರ ಪ್ರೇಮಿ ದುರ್ಗಾಸಿಂಗ್, ರಾಮಕುಂಜ ಪದವಿ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಕೃಷ್ಣಪ್ರಸಾದ್, ಶೌರ್ಯ ತಂಡದ ಮಹೇಶ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here