![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ನೆಲ್ಯಾಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೊಳಪಟ್ಟ ಕಾಂಚನ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಪುತ್ತೂರು ವಲಯದ ಅರಣ್ಯಾಧಿಕಾರಿಯಾಗಿರುವ ಕಿರಣ್ ಬಿ ಎಂ ದೀಪ ಪ್ರಜ್ವಲನದ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿ, ನಮ್ಮಲ್ಲಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಹೇಗೆ ಉಳಿಸಿ ಬೆಳೆಸಬೇಕೆಂಬುದನ್ನು ಮಕ್ಕಳಿಗೆ ತಿಳಿಸಿದರು.
![](https://puttur.suddinews.com/wp-content/uploads/2023/06/b94e064b-cdaa-4f29-ad9e-cca742aafe4e.jpg)
ಈ ಸಭಾ ಕಾರ್ಯಕ್ರಮದ ಅಧ್ಯಕ್ಷರಾದ ಮುಖ್ಯೋಪಾಧ್ಯಾಯ ರಮೇಶ್ ಮಯ್ಯರವರು ಮಾತನಾಡಿ ಸಾಲುಮರದ ತಿಮ್ಮಕ್ಕನ ಉದಾಹರಣೆಯೊಂದಿಗೆ ಗಿಡಗಳನ್ನು ನೆಟ್ಟು ಮಕ್ಕಳ ಹಾಗೆ ಪೋಷಿಸಿ ಬೆಳೆಸಬೇಕು ಎಂದು ತಿಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಪ್ರಾಥಮಿಕ ಶಾಲೆ ಕಾಂಚನದ ಮುಖ್ಯೋಪಾಧ್ಯಾಯರಾದ ಲಕ್ಷ್ಮಣಗೌಡ ಪರಿಸರ ಜಾಗೃತಿ ಕುರಿತು ಮಕ್ಕಳಿಗೆ ತಿಳಿಸಿದರು. ಪರಿಸರ ದಿನದ ಅಂಗವಾಗಿ ಶಾಲಾ ಆವರಣದಲ್ಲಿ ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಸಾಂಕೇತಿಕವಾಗಿ ಬಾದಾಮಿ ಸಸಿ ನೆಡಲಾಯಿತು. ಅರಣ್ಯಾಧಿಕಾರಿ ಶಿವಪ್ರಕಾಶ್ ಮಾರ್ಗದರ್ಶನದಂತೆ ಅರಣ್ಯ ಇಲಾಖೆ ಉದನೆ ಇವರ ವತಿಯಿಂದ ನೀಡಲ್ಪಟ್ಟ 100 ಸಸಿಗಳನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮವನ್ನು ವಿಜ್ಞಾನ ಶಿಕ್ಷಕಿ ಜಯಲಕ್ಷ್ಮಿ ನಿರೂಪಿಸಿ ವಿದ್ಯಾರ್ಥಿನಿಯರಾದ ಶ್ರೀ ಕೃತಿ ಸ್ವಾಗತಿಸಿ ನವ್ಯಶ್ರೀ ವಂದಿಸಿದರು.
![](https://puttur.suddinews.com/wp-content/uploads/2023/06/ac939e42-8685-49ff-8835-d0626e87756c.jpg)
![](https://puttur.suddinews.com/wp-content/uploads/2023/06/1f5e6f77-4dfe-4c13-8118-8d67645f7b82.jpg)