ಕುಂತೂರು ಶಾರದಾ ಭಜನಾ ಮಂಡಳಿಯಿಂದ ಬಸ್‌ನಿಲ್ದಾಣ ನಿರ್ಮಾಣಕ್ಕೆ ನೆರವು

0

ಪೆರಾಬೆ: ಕುಂತೂರು ಪೇಟೆಯಲ್ಲಿ ಆಲಂಕಾರು ಜೆಸಿಐ ವತಿಯಿಂದ ಹೊಸತಾಗಿ ನಿರ್ಮಾಣಗೊಳ್ಳುತ್ತಿರುವ ಬಸ್‌ನಿಲ್ದಾಣಕ್ಕೆ ಕುಂತೂರು ಶಾರದಾ ಭಜನಾ ಮಂಡಳಿ ವತಯಿಂದ 10 ಸಾವಿರ ರೂ. ನೆರವು ನೀಡಲಾಯಿತು.


ನೆರವಿನ ಮೊತ್ತದ ಚೆಕ್ ಅನ್ನು ಜೆಸಿಐ ಆಲಂಕಾರು ಇದರ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಹಾಗೂ ಜೇಸಿಐ ವಲಯ ತರಬೇತಿ ನಿರ್ದೇಶಕ ಪ್ರದೀಪ್ ಬಾಕಿಲ ಅವರಿಗೆ ಹಸ್ತಾಂತರ ಮಾಡಲಾಯಿತು. ಶಾರದಾ ಭಜನಾ ಮಂಡಳಿಯ ಅಧ್ಯಕ್ಷ ಕುಶಾಲಪ್ಪ ಗೌಡ ಅನ್ನಡ್ಕ, ಕಾರ್ಯದರ್ಶಿ ಅಶೋಕ್ ರೈ ಗಾಣಜಾಲು, ಟ್ರಸ್ಟ್‌ನ ಸದಸ್ಯರಾದ ಸುಬ್ರಹ್ಮಣ್ಯ ಗೌಡ ಎರ್ಮಾಳ, ಕಮಲಾಕ್ಷ ಶೆಟ್ಟಿ ಅಂಬರಾಜೆ, ಬಾಲಕ್ಷಷ್ಣ ಪೂಜಾರಿ ಸಾರಕೆರೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here