![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಾಣಿಯೂರು: ಕಾಪೆಜಾಲಿನಿಂದ ನಾಣಿಲದವರೆಗೆ ಸುಮಾರು 3 ಕಿ.ಮೀ ವರೆಗೆ ವಿದ್ಯುತ್ ಲೈನ್ ಗೆ ತಾಗುತ್ತಿದ್ದ ಮರದ ಗೆಲ್ಲನ್ನು ತೆರವು ಗೊಳಿಸುವ ಕಾರ್ಯ ನಡೆಯಿತು. ಕಾಪೆಜಾಲು, ದೈಪಿಲ, ದೇವಸ್ಯ,ಖಂಡಿಗ, ಮುಂಗ್ಲಿಮಜಲು, ಬಾಕಿಲ, ನಾಣಿಲದ ವರೆಗೆ ಹೆಚ್. ಟಿ ಹಾಗೂ ಎಲ್. ಟಿ ವಿದ್ಯುತ್ ಲೈನ್ ಗೆ ತಾಗುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಸವಣೂರು ಮೆಸ್ಕಾಂ ನ ಉಮೇಶ್ ಕೆರೆನಾರು ಹಾಗೂ ಮುಖ್ತಾರ್ ಅವರ ಜೊತೆ ದೈಪಿಲ ಕ್ರೀಡಾ ಸೇವಾ ಸಂಘದ ಪದಾಧಿಕಾರಿಗಳು,ಸದಸ್ಯರು ಸಾಥ್ ನೀಡಿದರು. ಗ್ರಾಮಸ್ಥರು ಸಹಕರಿಸಿದರು.
![](https://puttur.suddinews.com/wp-content/uploads/2023/06/ca10b898-dfac-4c52-85ae-e27dcc6e244b.jpg)