ವಕೀಲ ಕೆ.ಆರ್ ಆಚಾರ್ಯರವರ ಕಚೇರಿ ಸ್ಥಳಾಂತರಗೊಂಡು ಉದ್ಘಾಟನೆ

0

ಪುತ್ತೂರು: ವಕೀಲರಾಗಿರುವ ಕೆ.ಆರ್.ಆಚಾರ್ಯರವರ ಸ್ಥಳಾಂತರಗೊಂಡ ವಕೀಲರ ಕಛೇರಿ ಜೂ.12ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಹಿಂಭಾಗದಲ್ಲಿರುವ ಅವರ ಸ್ವಂತ ಕಟ್ಟಡ ಕೆ.ಆರ್.ಆಚಾರ್ಯ ಕೌಂಪೌಂಡ್‌ನಲ್ಲಿ ಉದ್ಘಾಟನೆಗೊಂಡಿತ್ತು.


ಕೆ.ಆರ್.ಆಚಾರ್ಯರವರ ಪತ್ನಿ ಪದ್ಮಾ ಕೆ.ಆರ್.ಆಚಾರ್ಯರವರು ದೀಪ ಪ್ರಜ್ವಲನೆ ಮಾಡಿದರು. ಕುಟುಂಬದ ಹಿರಿಯರಾದ ಉದ್ಯಮಿ ಕುಂಜಾರು ವಾಸುದೇವ ಆಚಾರ್ಯರವರ ಉಪಸ್ಥಿತಿಯಲ್ಲಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ ಉಪಸ್ಥಿತರಿದ್ದರು. ನ್ಯಾಯವಾದಿ ಕೆ.ಆರ್.ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಡಾ. ಆಶೀಶ್ ಆಚಾರ್ಯ, ಆಕಾಶ್ ಆಚಾರ್ಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ನವೀನ್ ಕುಮಾರ್ ಸಹಿತ ವಕೀಲರಾದ ಶಶಿಧರ ಬಿ.ಎನ್, ವಿನಾಯಕ ರಾಮ್ ಜಿ.ಪಿ, ದಿನಮಣಿ ಎನ್.ಭಟ್ ಉಪಸ್ಥಿತರಿದರು.

LEAVE A REPLY

Please enter your comment!
Please enter your name here