ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ ಪಡೆದ ಪುತ್ತೂರಿನ ಎಚ್.ಸಿ.ಛಾಯಾ

0

ಪುತ್ತೂರು: ಆಹಾರ ತಂತ್ರಜ್ಞಾನ ಅಧ್ಯಯನ ವಿಭಾಗದಲ್ಲಿ ಸಂಶೋಧನೆ ನಡೆಸಿ ಮಹಾಪ್ರಬಂಧ ಮಂಡಿಸಿದ ಎಚ್.ಸಿ. ಛಾಯಾ ಅವರಿಗೆ ದಾವಣಗೆರೆ ವಿಶ್ವವಿದ್ಯಾನಿಲಯವು ಪಿಎಚ್.ಡಿ. ಪದವಿ ಪ್ರದಾನ ಮಾಡಿದೆ.

ವಿಶ್ವವಿದ್ಯಾನಿಲಯದ ಅಹಾರ ತಂತ್ರಜ್ಞಾನ ವಿಭಾಗದ ಸಹಪ್ರಾಧ್ಯಾಪಕ ಡಾ.ಎಂ.ಪರಮೇಶ ಅವರ ಮಾರ್ಗದರ್ಶನದಲ್ಲಿ ‘ಫಾರ್ಮುಲೇಷನ್ ಅಂಡ್ ಫಾರ್ಟಿಫಿಕೇಷನ್ ಆಫ್ ಸೆಲೆಕ್ಟೆಡ್ ಸೀರೀಲ್ಸ್ ಅಮಡ್ ಪಲ್ಸ್ಸ್ ಫಾರ್ ಎನ್‌ಹ್ಯಾನ್ಸ್ಮೆಂಟ್ ಆಫ್ ನ್ಯೂಟ್ರೀಷನ್ ವ್ಯಾಲ್ಯೂಸ್’ ಎಂಬ ವಿಷಯ ಕುರಿತು ಛಾಯಾ ಅವರು ಸಂಶೋಧನೆ ನಡೆಸಿದ್ದರು.ಕೊಡಿಪ್ಪಾಡಿ ನಿವಾಸಿಯಾಗಿರುವ ಇವರು ಚನ್ನಕೇಶವ ಭಟ್‌ ಹಾಗೂ ಸರೋಜಿನಿ ಭಟ್‌ ಅವರ ಪುತ್ರಿ. ಪುತ್ತೂರಿನ ಬೊಳುವಾರಿನಲ್ಲಿ ಹೋಮಿಯೋಪತಿ ವೈದ್ಯಾರಾಗಿರುವ ಡಾ. ರಾಜೇಶ್‌. ಎಂ ಅವರ ಪತ್ನಿ.

LEAVE A REPLY

Please enter your comment!
Please enter your name here