ಜಾನುವಾರುಗಳ ದಫನ ಮಾಡಲೂ ಜಾಗ ಕಾದಿರಿಸಿ-ಅರಿಯಡ್ಕ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಗ್ರಹ

0

ಕೃತಕ ಗರ್ಭಧಾರಣೆಗೆ ಹೆಣ್ಣು ಕರುವಿನ ಲಸಿಕೆಯನ್ನೇ ನೀಡಿ
ಬೀದಿನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆಯಾಗಲಿ
ಗ್ರಾ.ಪಂ.ವ್ಯಾಪ್ತಿಗೆ ಪದವಿ ಕಾಲೇಜು ಬರಲಿ
ಮಕ್ಕಳಿಗೆ ಕೊಳೆತ ಮೊಟ್ಟೆ ಇಲ್ಲಿ ಬಾರದಂತೆ ನೋಡಿಕೊಳ್ಳಿ

ಭ್ರಷ್ಟಾಚಾರ ರಹಿತ ಸೇವೆ ಮಾಡಿ ತೃಪ್ತಿಯಿದೆ
ನನ್ನ ಎರಡೂವರೆ ವರ್ಷದ ಅವಧಿಯ ಅಧಿಕಾರದಲ್ಲಿ ಗ್ರಾಮದ ಅಭಿವೃದ್ಧಿಗೋಸ್ಕರ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭ್ರಷ್ಟಾಚಾರ ರಹಿತ ಜನ ಸೇವೆ ಮಾಡಿzನೆ ಎಂಬ ತೃಪ್ತಿ ನನ್ನಲ್ಲಿ ಇದೆ.ಉತ್ತಮ ಆಡಳಿತ ನೀಡಲು ಸಹಕರಿಸಿದ ಎಲ್ಲರಿಗೂ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ-
ಸೌಮ್ಯ ಬಾಲಸುಬ್ರಹ್ಮಣ್ಯ, ಅಧ್ಯಕ್ಷರು ಗ್ರಾ.ಪಂ ಅರಿಯಡ್ಕ

ಅರಿಯಡ್ಕ: ಜಾನುವಾರುಗಳನ್ನು ಧಪನ ಮಾಡಲು ಸ್ಥಳ ನಿಗದಿ ಮಾಡಬೇಕೆಂದು ಅರಿಯಡ್ಕ ಗ್ರಾಮಸಭೆಯಲ್ಲಿ ಆಗ್ರಹ ವ್ಯಕ್ತವಾಗಿದೆ.ಸಭೆಯು ಜು24ರಂದು ಕಾವು ಸುವರ್ಣ ಗ್ರಾಮೋದಯ ಸಮುದಾಯ ಭವನದಲ್ಲಿ ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯರವರ ಅಧ್ಯಕ್ಷೆಯಲ್ಲಿ ನಡೆಯಿತು.ನೋಡೆಲ್ ಅಧಿಕಾರಿಯಾಗಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಧರ್ಮಪಾಲ್ ಕರಂದ್ಲಾಜೆ ಕಾರ್ಯನಿರ್ವಹಿಸಿದರು.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಿವರಾಮ ಮಣಿಯಾಣಿ ಕುರುಂಜರವರು ವಿಷಯ ಪ್ರಸ್ತಾಪಿಸಿ,ಪಶುಗಳನ್ನು ಸಾಕುವವರ ಸಂಖ್ಯೆಯೇ ಕಡಿಮೆ ಅಗಿದೆ.ಗಂಡು ಕರು ಹುಟ್ಟಿದರೆ ಅದನ್ನು ಏನು ಮಾಡಬೇಕು?ನಮ್ಮಲ್ಲಿ ಗೋವು ಶಾಲೆಗಳು ಕೂಡಾ ಇಲ್ಲ.ಪಶುಸಂಗೋಪನೆ ಇಲಾಖೆ ವತಿಯಿಂದ ಉಚಿತವಾಗಿ ಕೃತಕ ಗರ್ಭಧಾರಣೆಗೆ ಹೆಣ್ಣು ಕರುಗಳ ಲಸಿಕೆಯನ್ನೇ ನೀಡಬೇಕು,ಹಾಗೇಯೇ ಸತ್ತ ಪಶುಗಳನ್ನು ದಫನ ಮಾಡಲು ಜಾಗ ಕಾದಿರಿಸಬೇಕು ಎಂದು ಒತ್ತಾಯಿಸಿದರು.ನರಸಿಂಹ ಪೂಂಜ ಗೋಳ್ತಿಲ ಮತ್ತಿತರರು ಧ್ವನಿಗೂಡಿಸಿದರು.ಈ ಬಗ್ಗೆ ಸಂಬಂಧಿಸಿದವರಿಗೆ ಬರೆದುಕೊಳ್ಳಲು ನಿರ್ಣಯಿಸಲಾಯಿತು.

ಬೀದಿನಾಯಿಗಳ ಕಾಟ: ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿ ಆಗಿದೆ.ನಾಯಿ ಮರಿಗಳನ್ನು ಶಾಲೆ ಅಂಗನವಾಡಿ ವಠಾರದಲ್ಲಿ ಬಿಡುವರರ ಸಂಖ್ಯೆ ಜಾಸ್ತಿ ಆಗಿದೆ,ನಾಯಿಗಳನ್ನು ಕಟ್ಟಿ ಸಾಕಬೇಕು ಹಾಗೂ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಅಮ್ಮಣ್ಣ ರೈ ಡಿ ಪಾಪೆಮಜಲು ಒತ್ತಾಯಿಸಿದರು.ಈ ಬಗ್ಗೆ ಗ್ರಾಮ ಪಂಚಾಯತ್ ಮತ್ತು ಸಾರ್ವಜನಿಕರು ಸಹಕರಿಸಿದರೆ ಬೀದಿನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆಗೆ ಪಶು ಸಂಗೋಪನಾ ಇಲಾಖೆ ಸದಾಸಿದ್ಧ ಎಂದು ನೋಡೆಲ್ ಅಧಿಕಾರಿ ಹೇಳಿದರು.

ಮೊಟ್ಟೆಯ ವಿಚಾರವಾಗಿ ಗೊಂದಲ: ಅಂಗನವಾಡಿ ಮಕ್ಕಳಿಗೆ ಸರಕಾರದಿಂದ ಮೊಟ್ಟೆಕೊಡುವ ಯೋಜನೆ ಜಾರಿಯಲ್ಲಿದೆ.ಕೆಲವೊಂದು ಕಡೆಗಳಲ್ಲಿ ಮಕ್ಕಳಿಗೆ ಕೊಳೆತ ಮೊಟ್ಟೆ ನೀಡಿರುವ ವರದಿಗಳು ಬರುತ್ತಿವೆ.ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಬಾರದ ರೀತಿಯಲ್ಲಿ ಎಚ್ಚರ ವಹಿಸಬೇಕೆಂದು ಅಮ್ಮಣ್ಣ ರೈ ಪಾಪೆಮಜಲು ಹೇಳಿದರು.ಪಂಚಾಯತ್ ಮಾಜಿ ಸದಸ್ಯ ಮಹಮ್ಮದ್ ಕುಂಞಯವರು ಮಾತನಾಡಿ ಶಾಲಾಮಕ್ಕಳಿಗೆ ಸರಕಾರದಿಂದ ಮೊಟ್ಟೆ ನೀಡಲು ಅನುದಾನ ಕಡಿಮೆ ಆಗುವ ಸಂದರ್ಭದಲ್ಲಿ ಪಂಚಾಯತ್‌ನಿಂದ ಪ್ರೋತ್ಸಾಹಧನ ನೀಡಿ ಒಳ್ಳೆಯ ಮೊಟ್ಟೆ ನೀಡಬೇಕೆಂದರು.

ಮಧ್ಯೆ ಏಕೆ ಮಾತನಾಡುವುದು?: ಈ ಸಂದರ್ಭದಲ್ಲಿ ಅಮ್ಮಣ್ಣ ರೈ ಪಾಪೆಮಜಲು ಮಾತನಾಡಿ,ನಾನು ಮಾತನಾಡುವಾಗ ನೀವು ಮಧ್ಯೆ ಮಧ್ಯೆ ಮಾತನಾಡುತ್ತೀರಿ.ಇದು ಸರಿಯಲ್ಲ.ನಾನು ಗ್ರಾಮಸ್ಥ ನನಗೂ ಮಾತನಾಡಲು ಹಕ್ಕಿದೆ ಎಂದರು.ಈ ವೇಳೆ ಅವರೊಳಗೆ ಸ್ವಲ್ಪ ಚರ್ಚೆ ನಡೆಯಿತಾದರೂ ನೋಡೆಲ್ ಅಧಿಕಾರಿಯವರು ಇಬ್ಬರ ಮಾತಿಗೂ ತೆರೆ ಎಳೆದರು.ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಮಾತನಾಡಿ,ಮೊಟ್ಟೆ ಪೂರೈಕೆ ರಾಜ್ಯ ಮಟ್ಟದಲ್ಲಿ ಆಗುವ ಟೆಂಡರು.ಇದಕ್ಕೆ ಗ್ರಾಮ ಪಂಚಾಯತ್‌ನಿಂದ ಪ್ರೋತ್ಸಾಹಧನ ನೀಡಲು ಸಾಧ್ಯವಿಲ್ಲ.ನಮಗೆ ಬರುವ ಅನುದಾನವೇ ಕಡಿಮೆ ಎಂದರು.ಪಂಚಾಯತ್‌ನಿಂದ ಕೆಲವೊಂದು ಸಲ ಅನಾವಶ್ಯಕವಾಗಿ ಹಣ ಖರ್ಚು ಮಾಡುತ್ತೀರಿ,ಇದನ್ನು ನಿಲ್ಲಿಸಿ ಪ್ರೋತ್ಸಾಹಧನ ನೀಡಿ ಎಂದು ಮಹಮ್ಮದ್ ಕುಂಞಿ ಹೇಳಿದರು.ನಾವು ಅನಾವಶ್ಯಕವಾಗಿ ಖರ್ಚು ಮಾಡಿಲ್ಲ.ಸಂದರ್ಭಕ್ಕೆ ತಕ್ಕಂತೆ ಭ್ರಷ್ಟಾಚಾರ ರಹಿತ ಸಾರ್ವಜನಿಕ ಸೇವೆಯನ್ನು ಮಾಡಿzವೆ.ಇದರಲ್ಲಿ ನಮಗೆ ತೃಪ್ತಿ ಇದೆ ಎಂದು ಅಧ್ಯಕ್ಷೆ ಸೌಮ್ಯಬಾಲಸುಬ್ರಹ್ಮಣ್ಯ ಹೇಳಿದರು.ನನ್ನ ಬಾಯಿ ಮಾತಿನಿಂದ ತಪ್ಪಾಗಿದ್ದರೆ ನನ್ನ ಮಾತನ್ನು ಹಿಂತೆಗೆದುಕೊಳ್ಳುವೆ ಎಂದು ಮಹಮ್ಮದ್ ಕುಂಞಯವರು ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆದರು.

ಶಾಲಾ ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆ ಮಾಡಿ: 2022-23ನೇ ಸಾಲಿನಲ್ಲಿ ಶಾಲಾ ಮಕ್ಕಳಿಗೆ ಸ್ಕಾಲರ್‌ಶಿಪ್ ಇನ್ನೂ ಬಂದಿಲ್ಲ, ಶಾಲಾ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಬಸ್ಸಿನ ವ್ಯವಸ್ಥೆಯೂ ಇಲ್ಲ ಎಂದು ಇಸುಬು ಮಾಡ್ನೂರು ಹೇಳಿದರು.ಇದಕ್ಕೆ ಪೂರಕವಾಗಿ ಗ್ರಾ.ಪಂ ಮಾಜಿ ಸದಸ್ಯ ತಿಲಕ್ ರೈ ಮಾತನಾಡಿ ಕೌಡಿಚ್ಚಾರುನಲ್ಲಿ ಶಾಲಾ ಮಕ್ಕಳಿಗೆ ಬೆಳಿಗ್ಗಿನ ಜಾವ ಯಾವುದೇ ಬಸ್ಸನ್ನು ನಿಲ್ಲಿಸುವುದಿಲ್ಲ.ಪುತ್ತೂರಿಗೆ ಹೋಗುವ ಶಾಲಾ ಮಕ್ಕಳಿಗೆ ಇದರಿಂದ ತೊಂದರೆ ಉಂಟಾಗಿದೆ.ಕಾವಿನಿಂದ ಪುತ್ತೂರಿಗೆ ಬೆಳಿಗ್ಗಿನ ಜಾವ ಕೆ.ಎಸ್.ಆರ್.ಟಿ.ಸಿ ಬಸ್ಸಿನ ವ್ಯವಸ್ಥೆ ಮಾಡಲು ನಿರ್ಣಯಿಸಬೇಕು.ಹಾಗೆಯೇ ಕೆ.ಎಸ್.ಆರ್.ಟಿ.ಸಿಗೆ ಪತ್ರ ಬರೆಯಬೇಕೆಂದರು.ಪಂಚಾಯತ್ ವ್ಯಾಪ್ತಿಯಲ್ಲಿ ನೂತನ ಪದವಿ ಕಾಲೇಜು ತೆರೆಯಲು ಒತ್ತಡ ಹಾಕಬೇಕೆಂದು ಅಮ್ಮಣ್ಣ ರೈ ಪಾಪೆಮಜಲು ಹೇಳಿದರು.

ಅರಿಯಡ್ಕ ಶಾಲಾ ಕಟ್ಟಡದಲ್ಲಿ ಬಿರುಕು: ಶತಮಾನದ ಇತಿಹಾಸ ಇರುವ ಅರಿಯಡ್ಕ ಸ.ಹಿ.ಪ್ರಾ.ಶಾಲೆಯ ಕಟ್ಟಡ ಬಿರುಕು ಬಿಟ್ಟಿದೆ.ಮುಂದಿನ ದಿನಗಳಲ್ಲಿ ಸುವರ್ಣ ಸಂಭ್ರಮವನ್ನು ಅಚರಿಸುವವರಿzವೆ.ಶಾಲಾ ಕಟ್ಟಡದಲ್ಲಿ ಮಕ್ಕಳು ಕಠಿಣ ಸ್ಥಿತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ,ಇಲಾಖೆ ತಕ್ಷಣ ಸ್ಪಂದಿಸಬೇಕು ಎಂದು ಸದಸ್ಯ ಹರೀಶ್ ರೈ ಜಾರತ್ತಾರು ಹೇಳಿದರು.

ಅಧಿಕಾರಿಗಳ ಗೈರು: ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಪಂಚಾಯತ್ ಇಲಾಖೆಯ ಇಂಜಿನಿಯರ್ ಸಭೆಗೆ ಬಂದಿಲ್ಲ.ಇವು ಬಹಳ ಪ್ರಮುಖ ಇಲಾಖೆಗಳು.ಗ್ರಾಮಸಭೆಗೆ ಅವರ ಉಪಸ್ಥಿತಿ ಅವಶ್ಯಕ.ಈ ನಿಟ್ಟಿನಲ್ಲಿ ಈ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಬೇಕೆಂದು ಶಿವರಾಮ ಮಣಿಯಾಣಿಯವರು ಹೇಳಿದರು.ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.ಗ್ರಾಮದ ಅಭಿವೃದ್ದಿಗೋಸ್ಕರ ಆರೋಗ್ಯಕರ ಚರ್ಚೆಗಳು ನಡೆದಿವೆ. ಒಳ್ಳೆಯ ಸ್ವಂದನೆ ಸಿಕ್ಕಿದೆ.ಉತ್ತಮ ರೀತಿಯಲ್ಲಿ ಗ್ರಾಮ ಸಭೆ ಮುಕ್ತಾಯವಾಗಿದೆ,ಸಾರ್ವಜನಿಕ ಸಹಕಾರಕ್ಕೆ ಧನ್ಯವಾದಗಳು ಎಂದು ನೋಡೆಲ್ ಅಧಿಕಾರಿ ಡಾ.ಧರ್ಮಪಾಲ್ ಹೇಳಿದರು.
ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ,ಸದಸ್ಯರುಗಳಾದ ಲೋಕೇಶ್ ಚಾಕೋಟೆ,ಮೋನಪ್ಪ ಪೂಜಾರಿ ಕೆರೆಮಾರು,ಹರೀಶ್ ರೈ ಜಾರತ್ತಾರು,ದಿವ್ಯನಾಥ ಶೆಟ್ಟಿ ಕಾವು,ಸದಾನಂದ ಮಣಿಯಾಣಿ,ಮಿನಾಕ್ಷಿ ಪಾಪೆಮಜಲು,ಭಾರತಿ ವಸಂತ್ ಕೌಡಿಚ್ಚಾರು,ಪುಷ್ಪಲತಾ ಮರತ್ತಮೂಲೆ,ರೇಣುಕಾಸತೀಶ್ ಕರ್ಕೇರ, ರಾಜೇಶ್ ಮಣಿಯಾಣಿ ತ್ಯಾಗರಾಜೆ,ಉಷಾರೇಖಾ ರೈ,ಅನಿತಾ ಆಚಾರಿಮೂಲೆ,ಹೇಮಾವತಿ ಚಾಕೋಟೆ,ಶಂಕರ ಮಾಡಂದೂರು,ವಿಜಿತ್ ಕೆರೆಮಾರು,ಜಯಂತಿ ಪಟ್ಟುಮೂಲೆ,ಸಲ್ಮಾ ಕಾವು,ಅಬ್ದುಲ್ ರಹಿಮಾನ್ ಕಾವು ಹಾಗೂ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು,ಗ್ರಾಮಸ್ಥರು, ಅರೋಗ್ಯಾಧಿಕಾರಿ ಸಿಬ್ಬಂದಿಗಳು,ಅಂಗನವಾಡಿ ಕಾರ್ಯಕರ್ತೆಯರು,ಆಶಾಕಾರ್ಯಕತೆಯರು,ವಿವಿಧ ಸಂಘ ಸಂಸ್ಥೆಯ ಮುಖ್ಯಸ್ಥರು,ಪಂಚಾಯತ್ ಸಿಬ್ಬಂದಿಗಳು ಹಾಜರಾಗಿದ್ದರು.ಪಂಚಾಯತ್ ಪಿಡಿಒ ಪದ್ಮ ಕುಮಾರಿ ಸ್ವಾಗತಿಸಿ,ಕಾರ‍್ಯದರ್ಶಿ ಶಿವರಾಮ ಮೂಲ್ಯ ವರದಿ ವಾಚಿಸಿ,ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here