ಮುಕ್ರಂಪಾಡಿ ರಿಪೇರಿಗೆಂದು ನಿಲ್ಲಿಸಲಾಗಿದ್ದ ವಾಹನಗಳಿಂದ ಬ್ಯಾಟರಿಗಳ ಕಳವು

0

ಪುತ್ತೂರು:ಮುಕ್ರಂಪಾಡಿಯಲ್ಲಿರುವ ಟೆಕ್ನೋ ಇಂಜಿನಿಯರಿಂಗ್ ವರ್ಕ್‌ಶಾಪ್ ಮುಂದೆ ರಿಪೇರಿಗೆಂದು ನಿಲ್ಲಿಸಲಾಗಿದ್ದ ವಾಹನಗಳಿಂದ ಬ್ಯಾಟರಿ ಕಳವು ಮಾಡಿದ ಘಟನೆ ಜು.31ರ ಬೆಳಗ್ಗೆ ಬೆಳಕಿಗೆ ಬಂದಿದೆ.


ಆರ್ಯಾಪು ಗ್ರಾಮದ ಅವನೀಶ್ ಕುಮಾರ್(38ವ)ರವರ ಮಾಲಕತ್ವದ, ಮುಕ್ರಂಪಾಡಿಯಲ್ಲಿರುವ ಟೆಕ್ನೋ ಇಂಜಿನಿಯರಿಂಗ್ ವರ್ಕ್ ಶಾಪ್‌ನ ಹೊರಗಡೆ ರಿಪೇರಿಗೆಂದು ನಿಲ್ಲಿಸಲಾಗಿದ್ದ ವಾಹನಗಳಿಂದ 7 ಬ್ಯಾಟರಿ ಮತ್ತು ಗ್ಯಾರೇಜ್‌ಗೆ ಸೇರಿದ 2 ಬ್ಯಾಟರಿಗಳು ಕಳವಾಗಿದೆ.ಅವನೀಶ್ ಅವರು ಜು.31ರಂದು ಬೆಳಿಗ್ಗೆ ವರ್ಕ್‌ಶಾಪ್‌ನ ಬಾಗಿಲು ತೆರೆಯುವ ವೇಳೆ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಕಳವಾದ ಬ್ಯಾಟರಿಗಳ ಒಟ್ಟು ಮೌಲ್ಯ ರೂ. 81 ಸಾವಿರ ಆಗಿದೆ. ಘಟನೆ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here