![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಚರಿತ್ ಅಮೀನ್ ಕೆ.ರವರು ಮಂಗಳೂರಿನ ಮಂಗಳಾ ಈಜುಕೊಳದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಈಜು ಸ್ಪರ್ಧೆಯಲ್ಲಿ 50 ಮೀಟರ್ ಬಟರ್ ಫ್ಲೈನಲ್ಲಿ ಬೆಳ್ಳಿ, 100 ಮೀಟರ್ ಬಟರ್ ಫ್ಲೈ ಯಲ್ಲಿ ಚಿನ್ನ ಹಾಗೂ 50 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ ಕಂಚಿನ ಪದಕ ಪಡೆದು ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ರಾಜ್ಯ ಮಟ್ಟದ ಈಜು ಸ್ಪರ್ಧೆ ಯಲ್ಲಿ ನಡೆಯುವ ರಿಲೇ ತಂಡವನ್ನು ಪ್ರತಿನಿಧಿಸುವ ದ.ಕ.ಜಿಲ್ಲಾ ತಂಡಕ್ಕೆ 100 ಮೀಟರ್ ಬಟರ್ ಫ್ಲೈ ಗೆ ಆಯ್ಕೆಯಾಗಿರುತ್ತಾರೆ. ಇವರು ವಿಟ್ಲದ ಕೊಪ್ಪಳ ನಿವಾಸಿ ಸೌಮ್ಯ ಹಾಗೂ ಚಂದ್ರಹಾಸ ಕೊಪ್ಪಳ ದಂಪತಿಗಳ ಪುತ್ರರಾಗಿದ್ದಾರೆ.
![](https://puttur.suddinews.com/wp-content/uploads/2023/08/c2f150f0-a5ff-431a-86c6-f6b4bd0c0820.jpg)