ಉರ್ಲಾಂಡಿಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ವತಿಯಿಂದ ಅಶ್ವತ್ಥ ಪೂಜೆ

0


ಪುತ್ತೂರು: ಸಾರ್ವಜನಿಕ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಉರ್ಲಾಂಡಿ ವತಿಯಿಂದ ವರ್ಷಂಪ್ರತಿ ನಡೆಯುವ ಶ್ರಾವಣ ಮಾಸದ ಶನಿವಾರದಂದು ವೆ.ಮೂ. ಹರಿಪ್ರಸಾದ್ ಬನಾರಿಯವರ ನೇತೃತ್ವದಲ್ಲಿ ಅಶ್ವತ್ಥ ಪೂಜೆಯು ಸೆ.2ರಂದು ಬೆಳಿಗ್ಗೆ ನಡೆಯಿತು.
ಸಕಲ ದೋಷ ಪರಿಹಾರಾರ್ಥವಾಗಿ ನಡೆದ ವಿಶೇಷ ಪೂಜೆಯಲ್ಲಿ ಅಶ್ವತ್ಥ ಮರಕ್ಕೆ ಹಾಲಾಭಿಷೇಕ, ಸೀಯಾಳಾಭಿಷೇಕ, ಅರಶಿನ ಲೇಪ ಮಾಡಿ, ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಎ.ಜೆ. ನೈಕ್, ಅಧ್ಯಕ್ಷ ನಡುಸಾರು ಶಿವ ಭಟ್, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಲೆ, ಕೋಶಾಧಿಕಾರಿ ಪುರುಷೋತ್ತಮ ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ಮೋಹನ್ ನಾಯರ್, ಅನಿಲ್‌ಕುಮಾರ್, ಸ್ಥಳೀಯರಾದ ರಘುರಾಮ ಹೆಗ್ಡೆ, ಪುಷ್ಪರಾಜ್ ಹೆಗ್ಡೆ, ವಿಠಲ್ ಮಾಸ್ತರ್, ಉಮಾಶಂಕರ್, ಜಯಂತ್ ಉರ್ಲಾಂಡಿ, ಜನಾರ್ಧನ ಗೌಡ, ಅಶೋಕ್ ಹೆಗ್ಡೆ, ಮಾಂಕು ನಾಯರಡ್ಕ, ಸತ್ಯಾನಂದ ಉರ್ಲಾಂಡಿ, ಯೋಗಾನಂದ ರಾವ್, ಪ್ರವೀಣ್ ಹೆಗ್ಡೆ, ರಾಜು ಉರ್ಲಾಂಡಿ, ಭಾರತೀ ಜಯರಾಂ, ರಾಜೇಶ್ವರಿ ಹೆಗ್ಡೆ, ಚೇತನಾ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here