ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ- ತೆಂಕಿಲ ವಿವೇಕಾನಂದ ಆ.ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಗಳೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಪುತ್ತೂರು ನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಆಗಸ್ಟ್ 31 ರಂದು ESR ಪ್ರೆಸಿಡೆನ್ಸಿ ಶಾಲೆ ಮರೀಲ್ ನಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಥಮ ಪ್ರಶಸ್ತಿಗಳನ್ನು ಪಡೆದುಕೊಂಡು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಹಿರಿಯರ ವಿಭಾಗದಲ್ಲಿ ದೀಪ್ತಿ ಕುಬಣೂರಾಯ (7ನೇ ತರಗತಿ) ಹಿಂದಿ ಕಂಠಪಾಠ ಪ್ರಥಮ, ನಾಗಭೂಷಣ ಕಿಣಿ (7ನೇ ತರಗತಿ) ಸಂಸ್ಕೃತ ಧಾರ್ಮಿಕ ಪಠಣ ಪ್ರಥಮ, ಅವನಿ ಎಸ್ ವಿ (7ನೇ ತರಗತಿ) ಲಘು ಸಂಗೀತ ಪ್ರಥಮ, ಸಮೀಕ್ಷಾ ಕೆ ರೈ (7 ನೇ ತರಗತಿ) ಛದ್ಮವೇಷ ಪ್ರಥಮ, ಅನಘ ಕೆ. ಆರ್ (6ನೇ ತರಗತಿ) ಕಥೆ ಹೇಳುವುದು ಪ್ರಥಮ, ಸಿರಿ ಹಿಳ್ಳೆಮನೆ (7ನೇ ತರಗತಿ) ಭಕ್ತಿಗೀತೆ ಪ್ರಥಮ , ನಿಶಾಂತ್ ಎಸ್ (5ನೇ ತರಗತಿ) ಮಿಮಿಕ್ರಿ ಪ್ರಥಮ, ಶ್ರೀರಕ್ಷ. ಕೆ (7ನೇ ತರಗತಿ) ಅಭಿನಯ ಗೀತೆ ದ್ವಿತೀಯ, ಸಾನ್ವಿ.ಎಸ್ (7ನೇ ತರಗತಿ) ಆಶುಭಾಷಣ ದ್ವಿತೀಯ, ಚಿಂತನ. ಎಮ್ (7ನೇ ತರಗತಿ) ಚಿತ್ರಕಲೆ ಮತ್ತು ಬಣ್ಣ ಹಚ್ಚುವುದು ದ್ವಿತೀಯ ಬಹುಮಾನ ಪಡೆದಿರುತ್ತಾರೆ.

ಕಿರಿಯರ ವಿಭಾಗದಲ್ಲಿ ರಿತ್ವಿಕ್.ಆರ್.ರೈ (4ನೇ ತರಗತಿ) ಲಘು ಸಂಗೀತ ಪ್ರಥಮ, ಆರಾಧ್ಯಕೃಷ್ಣ (4ನೇ ತರಗತಿ) ಕಥೆ ಹೇಳುವುದು ಪ್ರಥಮ, ಅದ್ವಿತ್ ರಾವ್ (4ನೇ ತರಗತಿ) ಆಶುಭಾಷಣ ಪ್ರಥಮ, ಮೈಥಿಲಿ ರೈ. ಪಿ (4ನೇ ತರಗತಿ) ಇಂಗ್ಲೀಷ್ ಕಂಠಪಾಠ ದ್ವಿತೀಯ, ಪ್ರಜ್ವಲ್ ಕೃಷ್ಣ (4ನೇ ತರಗತಿ), ಬಣ್ಣ ಹಚ್ಚುವುದು ಮತ್ತು ಚಿತ್ರಕಲೆ ದ್ವಿತೀಯ, ಎಂ. ಶ್ರೀವೈಷ್ಣವಿ ಶರ್ಮ (4ನೇ ತರಗತಿ) ಅಭಿನಯ ಗೀತೆ ದ್ವಿತೀಯ, ಶ್ರೀ ದುರ್ಗಾ (4ನೇ ತರಗತಿ) ಭಕ್ತಿ ಗೀತೆಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಡಿದ್ದಾರೆ. ಹಿರಿಯರ ಹಾಗೂ ಕಿರಿಯರ ಸ್ಪರ್ಧೆಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಕೂಡಿ ಹಾಕಿ ಎರಡೂ ವಿಭಾಗಗಳಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಗಳನ್ನೂ ಗೆದ್ದುಕೊಂಡಿದ್ದು ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here