ಕುಂಡಾಜೆ: ಶಿಕ್ಷಕ ನಾರಾಯಣ ಪಿ.ಎಸ್.ರವರಿಗೆ ಸನ್ಮಾನ

0

ರಾಮಕುಂಜ: ಕುಂಡಾಜೆ ಸರಕಾರಿ ಕಿ.ಪ್ರಾ.ಶಾಲೆಯಲ್ಲಿ 20 ವರ್ಷ ಕರ್ತವ್ಯ ನಿರ್ವಹಿಸಿ ಕೊಯಿಲ ಗ್ರಾಮದ ವಳಕಡಮ ಸರಕಾರಿ ಕಿ.ಪ್ರಾ.ಶಾಲೆಗೆ ಕೋರಿಕೆ ಮೇರೆಗೆ ವರ್ಗಾವಣೆಗೊಂಡಿರುವ ಶಿಕ್ಷಕ ನಾರಾಯಣ ಪಿ.ಎಸ್.ರವರನ್ನು ಅಂಗನವಾಡಿ ಕೇಂದ್ರ ಕುಂಡಾಜೆ, ಬಾಲವಿಕಾಸ ಸಮಿತಿ ಕುಂಡಾಜೆ ಮತ್ತು ಸ್ತ್ರೀಶಕ್ತಿ ಗುಂಪುಗಳ ವತಿಯಿಂದ ಸನ್ಮಾನಿಸಲಾಯಿತು.
ಬಾಲವಿಕಾಸ ಸಮಿತಿಯ ಜಯರತ್ನರವರು ಅಭಿನಂದನಾ ಭಾಷಣ ಮಾಡಿದರು. ಇಂದುಶೇಖರ ಶೆಟ್ಟಿ ಕುಕ್ಕೇರಿಯವರು ಶಾಲು, ಹಾರ, ಫಲಪುಷ್ಪ, ಸನ್ಮಾನ ಪತ್ರ ನೀಡಿ ಗೌರವಿಸಿದರು. ಅಂಗನವಾಡಿ ಮೇಲ್ವಿಚಾರಕಿ ಉಮಾವತಿ, ಹಿರಿಯರಾದ ಕುಂಞಿ, ಆಶಾಕಾರ್ಯಕರ್ತೆ ಪದ್ಮಾವತಿ, ಸಂಪ್ಯಾಡಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹರಿಣಾಕ್ಷಿ, ರಾಮಕುಂಜ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಯಮುನ, ಬಾಲಕ ವಿಕಾಸ ಸಮಿತಿಯ ಪದಾಧಿಕಾರಿಗಳು, ಸ್ತ್ರೀಶಕ್ತಿ ಗುಂಪಿನ ಸದಸ್ಯರು ಶುಭಹಾರೈಸಿದರು. ಅಂಗನವಾಡಿ ಕಾರ್ಯಕರ್ತೆ ಭಾಗೀರಥಿ ಸ್ವಾಗತಿಸಿ, ವಂದಿಸಿದರು. ಪೋಷಕರು, ಅಂಗನವಾಡಿ ಪುಟಾಣಿಗಳು ಉಪಸ್ಥಿತರಿದ್ದರು. ಸಹಾಯಕಿ ಜ್ಯೋತಿ ಸಹಕರಿಸಿದರು.

LEAVE A REPLY

Please enter your comment!
Please enter your name here