ಅ.17: ಪಡುಮಲೆ -ಪುದ್ವಾರ್ ಮಚ್ಚಿ

0

ಬಡಗನ್ನೂರುಃ ಪಡುಮಲೆ ಶ್ರೀ ಪೂಮಾಣಿ-ಕಿನ್ನಿಮಾಣಿ(ಉಳ್ಳಾಕುಲು) ದೈವಸ್ಥಾನ ಮತ್ತು ಶ್ರೀ ರಾಜನ್(ವ್ಯಾಘ್ರ ಚಾಮುಂಡಿ) ದೈವಸ್ಥಾನದಲ್ಲಿ ಶ್ರೀ ರಾಜನ್ ದೈವಕ್ಕೆ (ನವಾನ)  ಪುದ್ವಾರ್ ಮೆಚ್ಚಿ  ಕಾರ್ಯಕ್ರಮ ಅ.17 ರಂದು ನಡೆಯಲಿರುವುದು.

ಬೆಳಗ್ಗೆ ಗಂ 9 ರಿಂದ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ರವರ ನೇತೃತ್ವದಲ್ಲಿ  6 ತೆಂಗಿನ ಕಾಯಿ ಗಣಪತಿ ಹೋಮ ಶ್ರೀ ಪೂಮಾಣಿ-ಕಿನ್ನಿಮಾಣಿ(ಉಳ್ಳಾಕುಲು) ದೈವಸ್ಥಾನದಲ್ಲಿ ನಡೆಯಲಿದೆ. ಬಳಿಕ  11 ರಿಂದ ಶ್ರೀ ರಾಜನ್(ವ್ಯಾಘ್ರ ಚಾಮುಂಡಿ) ದೈವಸ್ಥಾನದಲ್ಲಿ ಶ್ರೀ ರಾಜನ್ ದೈವದ  ನೇಮ ನಡೆಯಲಿರುವುದು.

ಭಕ್ತಾಧಿಗಳು ಆಗಮಿಸಿ ಶ್ರೀ ದೈವಗಳ ಶ್ರೀ ಮುಡಿ ಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗುವಂತೆ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

LEAVE A REPLY

Please enter your comment!
Please enter your name here