ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ದೀಪಾವಳಿ ಹಬ್ಬ ಆಚರಣೆ

0

ನೆಲ್ಯಾಡಿ: ಉದನೆ ಸೈಂಟ್ ಆಂಟನೀಸ್ ಪ್ರೌಢಶಾಲೆ ಹಾಗೂ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ನಲ್ಲಿ ದೀಪಗಳ ಹಬ್ಬ ದೀಪಾವಳಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.


ಸಂಸ್ಥೆಯ ಆಡಳಿತಾಧಿಕಾರಿ ಜಾನ್ ಕೆ.ಕೆ., ಸೈಂಟ್ ಆಂಟನೀಸ್ ಪ್ರೌಢಶಾಲೆಯ ಮುಖ್ಯಸ್ಥ ಶ್ರೀಧರ ಗೌಡರವರು ಶುಭಾಶಯ ಕೋರಿದರು. ಸಹಶಿಕ್ಷಕಿ ಯಶೋಧ ದೀಪಾವಳಿಯ ಮಹತ್ವ ತಿಳಿಸಿದರು. ಗಣೇಶ್ ಸ್ಟೋರ್ ನೆಲ್ಯಾಡಿ ಇದರ ಮಾಲಕ ದಿನೇಶ್ ಎಂ.ಟಿ.ಅವರು ವಿದ್ಯಾರ್ಥಿಗಳಿಗೆ ಅವಲಕ್ಕಿ ಹಾಗೂ ರಸಾಯನ ವ್ಯವಸ್ಥೆ ಮಾಡಿದರು. ಅಜಿತ್ ಓರ್ಕಳ ಸಿಹಿತಿಂಡಿ ಲಡ್ಡಿನ ವ್ಯವಸ್ಥೆ ಮಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಅಜಿತ್ ಓರ್ಕಳರವರು ಕೊಡಮಾಡಿದ ಪಟಾಕಿ ಸಿಡಿಸಿ ದೀಪಾವಳಿ ಆಚರಿಸಲಾಯಿತು. ದೀಪಾವಳಿಯ ವಿಶೇಷ ತಿನಿಸು ಅವಲಕ್ಕಿ, ಬಾಳೆಹಣ್ಣು ರಸಾಯನ, ಲಡ್ಡು ಸವಿದು ವಿದ್ಯಾರ್ಥಿಗಳು ಸಂತಸಪಟ್ಟರು. ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ಹಾಗೂ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಭಾಗಿಯಾದರು.

LEAVE A REPLY

Please enter your comment!
Please enter your name here