ಬಡಗನ್ನೂರುಃ ಅರಿಯಡ್ಕ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಸ್ವಚ್ಚತಾ ಕಾರ್ಯಕ್ರಮ

0

ಬಡಗನ್ನೂರು: ‘ಶೌರ್ಯ’ ವಿಪತ್ತು ನಿರ್ವಹಣಾ ಘಟಕ, ಅರಿಯಡ್ಕ ವಲಯ ಇದರ ವತಿಯಿಂದ ಘಟಕದ ಸದಸ್ಯರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಡಗನ್ನೂರು ಇಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಡಿ.13 ರಂದು ನಡೆಸಿದರು.

ಶಾಲಾ ಮುಖ್ಯಗುರು  ಹರಿಣಾಕ್ಷಿ ಎ ಇವರು ಘಟಕದ ಜನಪರ ಕಾರ್ಯಕ್ರಮವನ್ನು ಶ್ಲಾಘಿಸಿದರು. ಶಾಲಾ ವಠಾರವನ್ನು ಸ್ವಚ್ಛ ಸುಂದರಗೊಳಿಸುವಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಅಡುಗೆ ಸಿಬಂದಿಗಳು ಹಾಗೂ ಎಸ್.ಡಿ.ಯಂ.ಸಿ ಸದಸ್ಯರು ಘಟಕದ ಸದಸ್ಯರೊಂದಿಗೆ ಕೈ ಜೋಡಿಸಿದರು.

LEAVE A REPLY

Please enter your comment!
Please enter your name here