![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಇಂದು ಅಯೋಧ್ಯೆಯಲ್ಲಿ ಶ್ರೀ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆದಿದೆ. ದೇಶಾದಾಂಧ್ಯಂತ ಮನೆ ಮಂದಿರಗಳಲ್ಲಿ ರಾಮಕೀರ್ತನೆಯನ್ನು ಹಾಡಿ ಶ್ರೀ ರಾಮನನ್ನು ಸ್ತುತಿಸಿ ಭಕ್ತರು ಸಂಭ್ರಮಿಸಿದರು. ಪುತ್ತೂರಿನ ಕಲ್ಲಾರೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಬೃಹತ್ ಎಲ್ ಇ ಡಿ ಪರದೆಯಲ್ಲಿ ವೀಕ್ಷಿಸಿದ ಭಕ್ತರು ಪ್ರಾಣ ಪ್ರತಿಷ್ಠೆಯ ವೈಭವವನ್ನು ಕಂಣ್ತುಂಬಿಕೊಂಡರು.
![](https://puttur.suddinews.com/wp-content/uploads/2024/01/ce11d646-a4f8-4248-9c2e-7c1dcf871249.jpg)