ಅಯೋಧ್ಯೆ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಕಾವುನಲ್ಲಿ ಪುತ್ತಿಲ ಪರಿವಾರದಿಂದ ಭಕ್ತಿ ಸಂಭ್ರಮಾಚರಣೆ

0

ಕಾವು: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮದೇವರ ಪ್ರಾಣಪ್ರತಿಷ್ಠೆಯ ಅಂಗವಾಗಿ ಜ.22ರಂದು ಸಂಜೆ ಕಾವುನಲ್ಲಿ ಪುತ್ತಿಲ ಪರಿವಾರದಿಂದ ಭಕ್ತಿ ಸಂಭ್ರಮಾಚರಣೆ ಮಾಡಲಾಯಿತು.


ಕಾವು ಪಂಚವಟಿನಗರದಲ್ಲಿರುವ ಶ್ರೀಪಂಚಲಿಂಗೇಶ್ವರ ದೇವರಕಟ್ಟೆಯಲ್ಲಿ ಶ್ರೀರಾಮದೇವರ ಫೋಟೋ ಇಟ್ಟು, ಸಂಜೆಯ ವೇಳೆ ಹಣತೆ ದೀಪ ಬೆಳಗಿಸಿ ಭಕ್ತಿ ಸಂಭ್ರಮಾಚರಣೆ ಮಾಡಿ ಬಳಿಕ ಕಾವು ಪೇಟೆಯಾದ್ಯಂತ ಸಿಹಿತಿಂಡಿ ಹಂಚಲಾಯಿತು.ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಕಾವು ಘಟಕದ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಅನೇಕ ರಾಮಭಕ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here