‘ಸಂವಿಧಾನ ಜಾಗೃತಿ ಜಾಥಾ’- ದರ್ಬೆಯಿಂದ ಕಿಲ್ಲೆ ಮೈದಾನದವರೆಗೆ ಬೈಕ್ ರ‍್ಯಾಲಿ

0

ಪುತ್ತೂರು: ಪುತ್ತೂರು ನಗರಸಭೆ ಮತ್ತು ತಾಲೂಕು ಆಡಳಿತದ ವತಿಯಿಂದ ಫೆ.4 ರಂದು ‘ಸಂವಿಧಾನ ಜಾಗೃತಿ ಜಾಥಾ’ ಪ್ರಯುಕ್ತ ದರ್ಬೆ ಜಂಕ್ಷನ್‌ನಿಂದ ಎನ್‌ಎಸ್‌ ಕಿಲ್ಲೆ ಮೈದಾನದವರೆಗೆ ಬೈಕ್ ರ‍್ಯಾಲಿ ನಡೆಸಲಾಯಿತು.

ಪುತ್ತೂರು ನಗರಸಭಾ ಆಯುಕ್ತ ಮಧು ಎಸ್.ಮನೋಹರ್ ಸ್ವಾಗತಿಸಿ, ತಹಶೀಲ್ದಾರ್ ಪುರಂದರ ಹೆಗ್ಡೆ ಸಂವಿಧಾನದ ಮಹತ್ವದ ಬಗ್ಗೆ, ಸಂವಿಧಾನ ಏಕೆ ಮುಖ್ಯ ಎಂಬುದನ್ನು ವಿವರಿಸಿ, ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು. ಕರ್ನಾಟಕ ರಾಜ್ಯ ಸರಕಾರ ಸಂವಿಧಾನ ಜಾಗೃತಿ ಜಾಥಾ ಆಯೋಜಿಸಿದ್ದು, ಫೆಬ್ರವರಿ 12 ರಂದು ಮಧ್ಯಾಹ್ನ 3 ಗಂಟೆಗೆ ಜಾಥಾ ಪುತ್ತೂರು ನಗರಸಭಾ ಕ್ಷೇತ್ರವನ್ನು ತಲುಪಲಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here