ಸತ್ಯನಾರಾಯಣ ರೈ ಸೊರಕೆಯವರಿಗೆ ಶ್ರದ್ಧಾಂಜಲಿ

0

ಪುತ್ತೂರು: ಜ.16ರಂದು ನಿಧನರಾದ ಸಾಮಾಜಿಕ ಮುಂದಾಳು ಸತ್ಯನಾರಾಯಣ ರೈ ಸೊರಕೆರವರ ಉತ್ತರ ಕ್ರಿಯೆಯು ಜ.26 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು. ಈ ಸಂದರ್ಭದಲ್ಲಿ ಜರಗಿದ ಶ್ರದ್ಧಾಂಜಲಿ ಸಭೆಯಲ್ಲಿ ರಾಮಯ್ಯ ರೈ ಅವರು ನುಡಿನಮನ‌ ಸಲ್ಲಿಸಿ ಮಾತನಾಡಿ, ಸತ್ಯನಾರಾಯಣ ರೈಯವರು ಕುಟುಂಬ ಮತ್ತು ಸಮಾಜದಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನ ವ್ಯಕ್ತಿಯಾಗಿ, ತನ್ನ ಬದುಕಿನಲ್ಲಿ ಸತ್ಯ ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡು ಜೀವನ ಸಾಗಿಸಿದವರು. ಸತ್ಯನಾರಾಯಣ ರೈಯವರ ಮಾದರಿ ವ್ಯಕ್ತತ್ವವನ್ನು ನಾವೆಲ್ಲರೂ ಅನುಕರಿಸಬೇಕೆಂದು ಹೇಳಿದರು. ಸತ್ಯನಾರಾಯಣ ರೈಯವರ ಪತ್ನಿ, ಮಕ್ಕಳು ಹಾಗೂ ಸೊರಕೆ ಹಾಗೂ ಕೂಡೇಲು ಕುಟುಂಬಸ್ಥರು ಮತ್ತು ಊರ- ಪರವೂರ ಹಿತೈಷಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here