ಅರೆಮಾದನಹಳ್ಳಿ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಕಂಬಳದಡ್ಡ ಸುಬ್ರಾಯ ಆಚಾರ್ಯರವರ ಮನೆಗೆ ಭೇಟಿ

0

ಪುತ್ತೂರು: ಕಜೆ ಅನ್ನಪೂರ್ಣೇಶ್ವರಿ ದೇವಸ್ಥಾನ ನಿರ್ಮಾಣ ಹಿನ್ನೆಲೆಯಲ್ಲಿ ಅರೆಮಾದನಹಳ್ಳಿಯ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿರವರು ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನಕ್ಕೆ ಭೇಟಿ ನೀಡಿದ ಬಳಿಕ ಆರ‍್ಯಾಪು ಗ್ರಾಮದ ಕಂಬಳದಡ್ಡ ಸುಬ್ರಾಯ ಆಚಾರ್ಯರವರ ಮನೆಗೆ ಭೇಟಿ ಆಶೀರ್ವಾದ ನೀಡಿರುತ್ತಾರೆ.


ಈ ಸಂದರ್ಭದಲ್ಲಿ ಕಂಬಳದಡ್ಡ ಸುಬ್ರಾಯ ಆಚಾರ್ಯರವರ ಕುಟುಂಬ ಅರೆಮಾದನಹಳ್ಳಿಯ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿರವರಿಗೆ ಆಯೋಧ್ಯೆ ದೇವಸ್ಥಾನದ ಪ್ರತಿಮೆ ನೀಡಿ ಗೌರವಿಸಲಾಯಿತು. ಆರ್ಯಾಪು ಶ್ರೀ ಮಾರಿಯಮ್ಮ ದೇವಸ್ಥಾನದ ಗೌರವಾಧ್ಯಕ್ಷ ಸತೀಶ್ ರೈ ಮಿಶನ್‌ಮೂಲೆ, ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ, ಆರ್ಯಾಪು ಗ್ರಾ.ಪಂ ಸದಸ್ಯ ನೇಮಾಕ್ಷ ಸುವರ್ಣ ಅಮ್ಮುಂಜ, ಎಎಸ್‌ಐ ಚಂದ್ರ, ನಾಗೇಶ್ ಸಂಪ್ಯ, ರವೀಂದ್ರ ಶೆಟ್ಟಿ ಕಂಬಳದಡ್ಡ, ವಿಶಾಲಾಕ್ಷಿ ಬೈಲೂರು ಕಾರ್ಕಳ, ವಿಜಿತ್ ಜ್ಯುವೆಲ್ಲರ‍್ಸ್‌ನ ಅಚ್ಯುತ ಆಚಾರ್ಯ, ವಿಶ್ವಕರ್ಮ ಸಮಾಜ ಬಾಂಧವರು, ಹಿತೈಷಿಗಳು ಸಹಿತ ಹಲವರು ಉಪಸ್ಥಿತರಿದ್ದರು. ಅಕ್ಷಯ ಜ್ಯುವೆಲ್ಲರ‍್ಸ್‌ನ ಮಾಲಕ ‘ಆಶ್ರಯ’ ನಿಲಯದ ರವಿಚಂದ್ರ ಆಚಾರ್ಯ ದಂಪತಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here