ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್ ರಿ. ಸವಣೂರು ಮಹಾಸಭೆ: ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ

0

ಗೌರವಾಧ್ಯಕ್ಷರಾಗಿ ಅಬ್ದುಲ್ ಖಾದರ್ ಸಹಲ್, ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಎಸ್.ಆರ್, ಕಾರ್ಯದರ್ಶಿಯಾಗಿ ಫಾರೂಕ್ ಬಿ.ಎಂ ಸ್ಟೋರ್ ಆಯ್ಕೆ

ಸವಣೂರು ಚಾಪಲ್ಲ ಮತ್ತು ಪಣೆಮಜಲು ಜಮಾಅತಿನ ಬಡ ಹಾಗೂ ಅನಾಥ ಹೆಣ್ಣುಮಕ್ಕಳ ಮದುವೆಗೆ ನೆರವಾಗುವ ಸದುದ್ದೇಶದಿಂದ ಕಳೆದ ಐದು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್ ರಿ. ಇದರ ಮಹಾಸಭೆಯು ಆದಿತ್ಯವಾರದಂದು ಸವಣೂರಿನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ರಫೀಕ್ ಟಾಸ್ಕೋ ವಹಿಸಿದ್ದರು. ಸಭೆಯಲ್ಲಿ ಕಳೆದ ಸಾಲಿನ ವರದಿಯನ್ನು ವಾಚಿಸಲಾಯಿತು. ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಝಾಕ್ ಕೆನರಾ ಸಂದರ್ಭೋಚಿತವಾಗಿ ಮಾತನಾಡಿದರು. ಟ್ರಸ್ಟಿನ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು. ಬಳಿಕ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಅಬ್ದುಲ್ ಖಾದರ್ ಸಹಲ್, ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಎಸ್.ಆರ್, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಕಾನಾವು ಮತ್ತು ಅಝೀಝ್ ಎಸ್.ಎಂ, ಕಾರ್ಯದರ್ಶಿಯಾಗಿ ಫಾರೂಕ್ ಬಿ.ಎಂ ಸ್ಟೋರ್, ಜತೆ ಕಾರ್ಯದರ್ಶಿಗಳಾಗಿ ಸವಾದ್ ಪಟ್ಟೆ ಮತ್ತು ಸಮೀರ್ ಶೈನ್, ಕೋಶಾಧಿಕಾರಿಯಾಗಿ ಹನೀಫ್ ಎಂ.ಎಚ್ ನೇಮಕಗೊಂಡರು.

ಗೌರವ ಸಲಹೆಗಾರರಾಗಿ ಅಬ್ದುಲ್ ಜಲೀಲ್ ಫೈಝಿ, ಅಶ್ರಫ್ ಶಾ ಮಾಂತೂರು, ಬಶೀರ್ ಚೆಡವು, ಅಬ್ದುಲ್ ರಝಾಕ್ ಕೆನರಾ, ನಝೀರ್ ಸಿ.ಎ ಇವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ರಫೀಕ್ ಟಾಸ್ಕೋ, ಝಕಾರಿಯಾ ಮಾಂತೂರು, ಝಾಹಿರ್ ಅಬ್ಬಾಸ್, ಆಸಿಫ್ ಗೋಲ್ಡ್, ರಝಾಕ್ ಡಿ. ಎ, ನಿಝಾರ್ ಕೇಕುಡೆ, ಯಾಕೂಬ್ ಸವಣೂರು, ಸಫ್ವಾನ್ ಸವಣೂರು, ರಶೀದ್ ಪಟ್ಟೆ, ಹನೀಫ್ ಪಟ್ಟೆ, ಇಕ್ಬಾಲ್ ಚಾಪಲ್ಲ, ಶರೀಫ್ ಚಾಪಲ್ಲ, ಅಶ್ರಫ್ ಬಿ ಸಿ, ಅಶ್ರಫ್ ಅರಫಾ, ಸಮೀರ್ ಕುರ್ತಲ, ಹನೀಫ್ ಮಲೇಷ್ಯಾ, ಹನೀಫ್ ಮುಂಡತ್ತಡ್ಕ, ಯಾಕೂಬ್ ಅಬಾಬಿಲ್, ಸಮೀರ್ ಕೆರೆಕೋಡಿ, ರಿಯಾಝ್ ಸುಳ್ಯ ಶಾಂತಿನಗರ, ಅನ್ಸಾರ್ ಆರಿಗಮಜಲು, ಸಿದ್ದೀಖ್ ಆರಿಗಮಜಲು, ಹಾರಿಸ್ ಆರಿಗಮಜಲು, ಅನ್ಸಾರ್ ಪುದ್ದೊಟ್ಟು, ಹನೀಫ್ ಶಾಂತಿನಗರ, ಶರೀಫ್ ಕಾಯರ್ಗ, ಹನೀಫ್ ಸೋಂಪಾಡಿ, ಯೂಸುಫ್ ಕಾಯರ್ಗ, ರಾಝಿಕ್ ಕಣಿಮಜಲ್, ಶಾಫಿ ಮಾಂತೂರು, ರಫೀಕ್ ಮಲೇಶಿಯಾ, ಫೈಝಲ್ ಕಾಯರ್ಗ, ಶಾಕಿರ್ ಕಾಯರ್ಗ, ರಾಝಿಕ್ ಕೇಕುಡೆ, ಅಶ್ರಫ್ ಕಂಪ, ಅಶ್ರಫ್ ಚಾಪಲ್ಲ, ಹಮೀದ್ ಕೆಡೆಂಜಿ, ರಿಯಾಝ್ ಸವಣೂರು, ಉಮ್ಮರ್ ಕಾಯರ್ಗ, ಫಯಾಝ್ ಪಣೆಮಜಲು, ನೌಫಲ್ ಚೆಡವು ಇವರನ್ನು ಸದಸ್ಯರನ್ನಾಗಿ ಆರಿಸಲಾಯಿತು.
ಯಾಕೂಬ್ ಸವಣೂರು, ಸ್ವಾಗತಿಸಿ, ಆಸಿಫ್ ಗೋಲ್ಡ್ ವಂದಿಸಿದರು.

LEAVE A REPLY

Please enter your comment!
Please enter your name here