ಶ್ರೀ ಗುರು ರಾಘವೇಂದ್ರ ಮಠದ ಬ್ರಹ್ಮಕಲಶಾಭಿಷೇಕ-ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಆಮಂತ್ರಣ

0

ಉಪ್ಪಿನಂಗಡಿ: ಇಲ್ಲಿನ 34ನೇ ನೆಕ್ಕಿಲಾಡಿ ಶ್ರೀ ಗುರು ರಾಘವೇಂದ್ರ ಮಠದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರಿಕೆಯನ್ನು ಮೊದಲಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರಿಗೆ ನೀಡಿ ಕಾರ್ಯಕ್ರಮಕ್ಕೆ ಆಮಂತ್ರಿಸಲಾಯಿತು.


ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಉದಯ ಕುಮಾರ್, ಕ್ಷೇತ್ರ ಪುರೋಹಿತ ಹರೀಶ ಭಟ್ ಬಿಳಿಯೂರುಗುತ್ತು, ಮಠದ ಪದಾಧಿಕಾರಿಗಳಾದ ಧನ್ಯಕುಮಾರ್ ರೈ, ರಾಧಾಕೃಷ್ಣ ನಾಯಕ್, ಸದಾನಂದ ನೆಕ್ಕಿಲಾಡಿ, ಎನ್.ಗೋಪಾಲ ಹೆಗ್ಡೆ, ಜಯಪ್ರಕಾಶ ಶೆಟ್ಟಿ, ಸುರ್ಣೇಶ್ ಗಾಣಿಗ, ವಿನೀತ್ ಶಗ್ರಿತ್ತಾಯ ಮತ್ತಿತ್ತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here