ಸ್ಪೋಟಕ ಬಳಸಿ ಕಲ್ಲು ಒಡೆಯುವ ವೇಳೆ ಕಲ್ಲಿನ ಚೂರುಬಿದ್ದು ಮನೆಯ ಶೀಟುಗಳಿಗೆ ಹಾನಿ-ದೂರು

0

ಕಡಬ: ಸೋಟಕ ಬಳಸಿ ಕಲ್ಲು ಒಡೆಯುವ ವೇಳೆ ಕಲ್ಲಿನ ಚೂರುಗಳು ಬಿದ್ದು ಮನೆಯ ಮುಂಭಾಗ ಅಳವಡಿಸಿದ ಶೀಟುಗಳು ಹಾನಿಗೊಂಡಿರುವ ಬಗ್ಗೆ ಕಡಬ ತಾಲೂಕಿನ ಯೇನೆಕಲ್ಲು ಗ್ರಾಮದ ಕುಕ್ಕಪ್ಪನ ಮನೆ ನಿವಾಸಿ ಆನಂದ ಗೌಡ ಎಂಬವರು ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದಾರೆ.


ಮನೆಯ ಸಮೀಪದ ಏನೇಕಲ್ಲು ಗ್ರಾಮದ ಅಜಿರುಪೂಲಿ ಎಂಬಲ್ಲಿ ದಯಾನಂದ ಕುಕ್ಕಪ್ಪನ ಮನೆ ಎಂಬವರು ತಮ್ಮ ಜಾಗದಲ್ಲಿದ್ದ ಕಲ್ಲುಗಳನ್ನು ಅಕ್ರಮವಾಗಿ ಸ್ಪೋಟಕ ಬಳಸಿ ಕಲ್ಲುಗಳನ್ನು ಒಡೆದು ಸೈಜು ಕಲ್ಲುಗಳನ್ನಾಗಿ ತಯಾರಿಸುತ್ತಿದ್ದಾರೆ. ಕಲ್ಲುಗಳನ್ನು ಸ್ಪೋಟಕ ಬಳಸಿ ಒಡೆಯುವ ಸಮಯ ಕಲ್ಲುಗಳು ಸ್ಪೋಟಗೊಂಡು ಸಿಡಿದ ಕಲ್ಲಿನ ಚೂರುಗಳು ನಮ್ಮ ಮನೆಯ ಎದುರುಗಡೆ ಸೀಟು ಹಾಕಿ ಅಳವಡಿಸಿದ ಶೀಟುಗಳ ಮೇಲೆ ಬಿದ್ದು, ಎರಡು ಶೀಟುಗಳು ಹಾನಿಗೊಂಡಿರುತ್ತದೆ. ಕಲ್ಲು ಹುಡಿಯಿಂದ ಪರಿಸರ ಮಾಲಿನ್ಯವೂ ಉಂಟಾಗಿರುತ್ತದೆ ಎಂದು ಆನಂದ ಗೌಡ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ : 23 /2024, ಕಲಂ: 427 ಐಪಿಸಿ ಮತ್ತು ಕಲಂ:5, 9ಆ(1)(ಚಿ) ಸ್ಪೋಟಕ ಕಾಯ್ದೆ ಅಧಿನಿಯಮ 1884 ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here