ಪುತ್ತೂರು ಪಿ.ಎಲ್.ಡಿ, ಬ್ಯಾಂಕಿನ ನಿರ್ದೇಶಕ ಎಸ್.ಸೋಮಪ್ಪ ನಾಯ್ಕರವರಿಗೆ ಶ್ರದ್ಧಾಂಜಲಿ

0

ಪುತ್ತೂರು: ಏ. 9 ರಂದು ನಿಧನರಾದ ಪುತ್ತೂರು ಪಿ.ಎಲ್.ಡಿ, ಬ್ಯಾಂಕಿನ ನಿರ್ದೇಶಕ ಎಸ್.ಸೋಮಪ್ಪ ನಾಯ್ಕರವರಿಗೆ ಬ್ಯಾಂಕಿನ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಿ, ನುಡಿ ನಮನ ಸಲ್ಲಿಸುವ ಕಾರ್‍ಯಕ್ರಮ ಏ.30 ರಂದು ಬ್ಯಾಂಕಿನ ಸಭಾಂಗಣದಲ್ಲಿ ಜರಗಿತು.

ಬ್ಯಾಂಕಿನ ಅಧ್ಯಕ್ಷ ಭಾಸ್ಕರ್ ಎಸ್ ಗೌಡ ಇಚ್ಲಂಪಾಡಿರವರು ಹಾಗೂ ಕಸ್ಕ್‌ರ್ಡ್ ಬ್ಯಾಂಕ್ ಬೆಂಗಳೂರು ಇದರ ಜಿಲ್ಲಾ ನಿರ್ದೇಶಕರೂ ಆಗಿರುವ ಪುತ್ತೂರು ಪಿ.ಎಲ್.ಡಿ, ಬ್ಯಾಂಕ್ ನಿರ್ದೇಶಕ ರಾಜಶೇಖರ್ ಜೈನ್ ಎನ್ ರವರು ಮಾತನಾಡಿ ಬ್ಯಾಂಕಿನಲ್ಲಿ ಸೋಮಪ್ಪ ನಾಯ್ಕ್‌ರವರು ಸಲ್ಲಿಸಿದ ಸೇವಾ ಕಾರ್‍ಯವನ್ನು ಸ್ಮರಿಸಿ, ನುಡಿನಮನ ಸಲ್ಲಿಸಿದರು. ಬ್ಯಾಂಕಿನ ಉಪಾಧ್ಯಕ್ಷೆ ಸುಜಾತ ರಂಜನ್ ರೈ, ಕೋಶಾಧಿಕಾರಿ ನಾರಾಯಣ ಪೂಜಾರಿ ಕುರಿಕ್ಕಾರ, ನಿರ್ದೇಶಕರುಗಳಾದ ಮನೋಹರ ರೈ ಎ.ಬಿ, ನಾರಾಯಣ ಕನ್ಯಾನ, ದೇವಯ್ಯ ಗೌಡ, ಯುವರಾಜ್ ಕೆ, ಧರ್ಣಪ್ಪ ಮೂಲ್ಯ ಪಿ, ಪ್ರವೀಣ್ ರೈ ಎಂ, ಉಮೇಶ್ ನಾಯ್ಕ್, ಶೀನ ನಾಯ್ಕ, ಬ್ಯಾಂಕಿನ ವ್ಯವಸ್ಥಾಪಕ ಶೇಖರ್ ಎಂ ಹಾಗೂ ಎಲ್ಲಾ ಸಿಬ್ಬಂಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here