ಕೊಡಿಪ್ಪಾಡಿ ಆನಾಜೆ ನಿವಾಸಿ ಇಬ್ರಾಹಿಮ್ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದಾಗಿ ನಿಧನ

0

ಪುತ್ತೂರು : ಕೊಡಿಪ್ಪಾಡಿ ಗ್ರಾಮದ ಆನಾಜೆ ಎಂಬಲ್ಲಿನ ದಿ. ಅಬ್ದುಲ್ಲ ರವರ ಪುತ್ರ ವಿದೇಶದಲ್ಲಿ ಉದ್ಯೋಗಿಯಾಗಿರುವ ಇಬ್ರಾಹಿಂ( 58 ವ.)ರವರು ಸೌದಿ ಅರೇಬಿಯಾದ ಕರ್ಜ್ ನಲ್ಲಿ ಹೃದಯಾಘಾತದಿಂದ ಜೂ. 10ರಂದು ನಿಧನರಾದರು.ಮೃತರು ಈ ಹಿಂದೆ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆ ಬಳಿಯಲ್ಲಿ ಫೂಟ್ ವೇರ್ ಶಾಫ್ ನಡೆಸಿ‌ಕೊಂಡಿದ್ದು, ಆ ಬಳಿಕ ಅವರು ಸೌದಿ ಅರೇಬಿಯಾದ ಕರ್ಜ್ ನಲ್ಲಿ ಉದ್ಯೋಗ ಮಾಡುತ್ತಿದ್ದರು.

ಮೃತರು ತಾಯಿ ಜೈನಾಬಿ, ಪತ್ನಿ ಐಸಮ್ಮ, ಪುತ್ರ ಇಬ್ರಾಹಿಂ ಬಾಷಿತ್, ಅಕ್ಕ ಆಸ್ಯಮ್ಮ, ಸಹೋದರರಾದ ಅಬೂಬಕ್ಕರ್, ಮಮ್ಮುಂಞ, ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿರುವ ಅಬ್ದುಲ್ ರಹಿಮಾನ್ ಸೇರಿದಂತೆ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತದೇಹವು ಜೂ.13ರಂದು ಸ್ವದೇಶಕ್ಕೆ ತಲುಪಲಿದ್ದು, ಆ ಬಳಿಕ ಮೃತರ ಮನೆಯಲ್ಲಿ ಅಂತಿಮ ವಿಧಿವಿಧಾನ ನಡೆದ ಬಳಿಕ ಕೊಡಿಪಾಡಿ ರಹಮಾನಿಯ ಜುಮ್ಮಾಮಸೀದಿಯಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಮನೆಯವರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here