ನಾಟಾ ಪರೀಕ್ಷೆ: ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ -ವಿಜ್ಞಾತ್‌ ಶೆಟ್ಟಿಗೆ ರಾಜ್ಯಕ್ಕೆ 30ನೇ ರ‍್ಯಾಂಕ್‌

0

ಪುತ್ತೂರು: ಕೌನ್ಸಿಲ್‌ ಆಫ್‌ಆರ್ಕಿಟೆಕ್ಚರ್, ನವದೆಹಲಿ ನಡೆಸಿದನ್ಯಾಷನಲ್‌ ಆಪ್ಟಿಟ್ಯೂಡ್‌ ಟೆಸ್ಟ್‌ ಇನ್ಆರ್ಕಿಟೆಕ್ಚರ್(ಎನ್.ಎ.ಟಿ.ಎ-ನಾಟಾ) ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಪುತ್ತೂರಿನ ಸುಧೀರ್‌ ಶೆಟ್ಟಿ ಹಾಗೂ ಶಮಿತಾ ಶೆಟ್ಟಿ ದಂಪತಿ ಪುತ್ರನಾದ ವಿಜ್ಞಾತ್‌ ಶೆಟ್ಟಿ ನಾಟಾ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 30ನೇ ರ‍್ಯಾಂಕ್‌ ಗಳಿಸಿರುತ್ತಾರೆ. ಅಖಿಲೇಶ್‌ ಎಂ.ಎಸ್‌ ರಾಜ್ಯ ಮಟ್ಟದಲ್ಲಿ 170ನೇ ರ‍್ಯಾಂಕ್‌ ಗಳಿಸಿದ್ದು, ಇವರು ಪುತ್ತೂರಿನ ಸತ್ಯಪ್ರಸಾದ್‌ ಎಂ ಹಾಗೂ ಉಮಾಶಂಕರಿ ಎಂ.ಎಸ್‌ ದಂಪತಿಗಳ ಪುತ್ರ.

ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here