ಡಾ| ಪಿ.ಕೆ.ಗಣೇಶ್ ಆಕಾಶವಾಣಿ ’ಎ’ ಗ್ರೇಡ್ ಕಲಾವಿದರಾಗಿ ಭಡ್ತಿ

0

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸ್ಯಾಕ್ಸೋಪೋನ್ ವಾದಕರಾಗಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಪಿ.ಕೆ.ಗಣೇಶ್ ಅವರು ಪ್ರಸಾರ ಭಾರತಿ ಮಂಗಳೂರು ಆಕಾಶವಾಣಿಯ ’ ಎ’ ಗ್ರೇಡ್ ಕಲಾವಿದರಾಗಿ ಪದೋನ್ನತಿ ಹೊಂದಿದ್ದಾರೆ.


ನೆಲ್ಲಿಕಟ್ಟೆ ನಿವಾಸಿ ಡಾ| ಪಿ.ಕೆ.ಗಣೇಶ್ ಅವರು ಸಂಗೀತ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. 2023ರಲ್ಲಿ ತಮಿಳುನಾಡು ಧರ್ಮಪುರಂ ಅಧೀನಂನಲ್ಲಿ ಚಿನ್ನದ ಪದಕ ಮತ್ತು ಸ್ಯಾಕೋಪೋನ್ ಕಲಾನಿಧಿ ಪ್ರಶಸ್ತಿ ಪಡೆದಿದ್ದರು. ಇದೀಗ ಅಕಾಶವಾಣಿ ಬಿ(ಐ)ಪ್ಲಸ್ ಗ್ರೇಡ್ ನಿಂದ ಅವರ ಸ್ಯಾಕ್ಸೋಪೋನಲ್ಲಿ ತನ್ನ ಕಾರ್ಯಕ್ಷಮತೆಯನ್ನು ಅನುಮೋದಿಸಲಾಗಿದ್ದು ’ಎ’ ಗ್ರೇಡ್‌ಗೆ ಪದೋನ್ನತಿ ಹೊಂದಿದ್ದಾರೆ.

LEAVE A REPLY

Please enter your comment!
Please enter your name here