ಕುಂತೂರು ಎರ್ಮಾಳದಲ್ಲಿ ನಿಸರ್ಗ ನರ್ಸರಿ ಶುಭಾರಂಭ

0

ಪುತ್ತೂರು: ನಿಸರ್ಗ ಸ್ವೀಟ್ಸ್‌ನವರ ಸಹಸಂಸ್ಥೆ, ನಿಸರ್ಗ ನರ್ಸರಿ ಕಡಬದ ಕುಂತೂರು ಎರ್ಮಾಳದಲ್ಲಿ ಆ.26ರಂದು ಶುಭಾರಂಭಗೊಂಡಿತು.

ಪೆರಾಬೆ ಗ್ರಾಮ ಪಂಚಾಯತ್ ಅದ್ಯಕ್ಷೆ ಸಂಧ್ಯಾ ಕಾರ್ಯಕ್ರಮ ಉದ್ಘಾಟಿಸಿದರು. ಪೆರಾಬೆ ಗ್ರಾಮ ಪಂಚಾಯತ್ ಸದಸ್ಯ ಮೋಹನ್‌ದಾಸ್ ರೈ ಪರಾರಿ, ಮಾಜಿ ಅಧ್ಯಕ್ಷೆ ಬೇಬಿ ಪಾಟಾಳಿ, ಕುಂತೂರು ಮಾರ್ ಇವಾನಿಯಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಮುಖ್ಯಗುರು ಅಲೆನ್ ಮೇರಿ ಡಿ.ಎಂ., ಆಲಂಕಾರು ಸಿಎ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಈಶ್ವರ ಗಡ ಪಜ್ಜಡ್ಕ, ಶರವೂರು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪೂವಪ್ಪ ನಾಯ್ಕ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು. ಮಾಲಕಿ ಗಿತಾ ಸ್ವಾಗತಿಸಿ ಮಾತನಾಡಿ ನಮ್ಮಲ್ಲಿ ಅಡಿಕೆ, ತೆಂಗು ಮತ್ತು ಹಣ್ಣಿನ, ಹೂವಿನ ಗಿಡಗಳು ಲಭ್ಯವಿದೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು. ಸಮನ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here