ಕರ್ನೂರು ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕರ್ನೂರು ಇದರ ಆಶ್ರಯದಲ್ಲಿ ಜರುಗಲಿರುವ 29ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ದ ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

ಸಮಿತಿಯ ಗೌರವಾಧ್ಯಕ್ಷ ರವಿಕಿರಣ್ ಶೆಟ್ಟಿ ಬೆದ್ರಾಡಿ,ಅಧ್ಯಕ್ಷರಾದ ಪ್ರವೀಣ್ ರೈ ಮೂರ್ತಿಮಾರ್,ಕಾರ್ಯಾಧ್ಯಕ್ಷ ಪ್ರದೀಪ್ ರೈ ಕರ್ನೂರು,ಕಾರ್ಯದರ್ಶಿ ಪ್ರವೀಣ್ ಕೋರಿಗದ್ದೆ,ಜತೆ ಕಾರ್ಯದರ್ಶಿ ಕುಮಾರನಾಥ ಪೂಜಾರಿ ಚಾರ್ಪಾಟ್ಟೆ,ಖಜಾಂಚಿ ಮಂಜುನಾಥ ರೈ ಕರ್ನೂರು ಹಾಗೂ ಸರ್ವ ಸದಸ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.

ಸೆ.7ರಂದು ವಿವಿಧ ಅಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಹಾಗೂ ವಿಶೇಷವಾಗಿ ಶಾಸಕರು ಅಶೋಕ್ ರೈ ಕೋಡಿಂಬಾಡಿ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರುರವರಿಗೆ ಕರ್ನೂರು ಜನತೆಯ ಗೌರವಾಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here